Advertisement

ಭಟ್ಕಳ: ಮುರ್ಡೇಶ್ವರ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿ ಪ್ರವಾಸಿಗ ಸಾವು

07:23 PM Jun 19, 2022 | Team Udayavani |

ಭಟ್ಕಳ: ಮುರ್ಡೇಶ್ವರದ ಕಡಲಬ್ಬರಕ್ಕೆ ಪ್ರವಾಸಿಗನೋರ್ವ ಕೊಚ್ಚಿಕೊಂಡು ಹೋಗಿ ಮೃತ ಪಟ್ಟ ಘಟನೆ ರವಿವಾರ ಸಂಭವಿಸಿದೆ.

Advertisement

ಮೃತನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಕಂಚುಕೋಟೆಯ ನಿವಾಸಿ ಮಹೇಶ (33) ಎಂದು ಗುರುತಿಸಲಾಗಿದೆ.

ಮಹೇಶ ಹಾಘೂ ಸ್ನೇಹಿತರು ಸೇರಿಕೊಂಡು ಕಾರಿನಲ್ಲಿ ಬಂದಿದ್ದು ಸಿಗಂದೂರು, ಜೋಗ ಫಾಲ್ಸ್ ಎಲ್ಲಾ ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಬಂದಿದ್ದರು. ರವಿವಾರ ಮುರ್ಡೇಶ್ವರ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ದೊಡ್ಡ ಅಲೆಯೊಂದು ಬಂದು ಮಹೇಶನನ್ನು ಕೊಚ್ಚಿಕೊಂಡು ಹೋಗಿದ್ದು ಸ್ವಲ್ಪ ಹೊತ್ತಿನಲ್ಲಿಯೇ ಮೀನುಗಾರರು ಆತನನ್ನು ರಕ್ಷಣೆ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತ ಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು  ಪರೀಕ್ಷಿಸಿ ಹೇಳಿದ್ದಾರೆ.

ಅವರೊಂದಿಗೆ ಬಂದಿದ್ದ ಗಂಗಾಭವಾನಿ ಕೋಂ ಮಂಜುನಾಥ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಬ್ ಇನ್ಸಪೆಕ್ಟರ್ ಪರಮಾನಂದ ಕೊಣ್ಣೂರು ಅವರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next