Advertisement

ಮಲಗಿದ್ದವರ ಮೇಲೆ ಚಲಿಸಿದ ಕಾರು: ಇಬ್ಬರ ಸ್ಥಿತಿ ಗಂಭೀರ

12:08 AM Nov 26, 2021 | Team Udayavani |

ಮಂಗಳೂರು: ನಗರದ ಮಂಗ ಳೂರು ಜಂಕ್ಷನ್‌ ರೈಲು ನಿಲ್ದಾಣ (ಪಡೀಲ್‌) ಬಳಿಯ ಫ‌ುಟ್‌ಪಾತ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಗುರುವಾರ ಬೆಳಗ್ಗಿನ ಜಾವ ಕಾರು ಚಲಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮಧ್ಯಪ್ರದೇಶದ ಅಮರ್‌ಪುರ ನಿವಾಸಿಗಳಾದ ಕಲ್ಯಾಣ್‌ ಸಿಂಗ್‌ (50) ಮತ್ತು ಪಟೇಲಾಲ್‌ (40) ಗಾಯಗೊಂಡವರು. ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರನ್ನು ಚಲಾಯಿಸಿದ್ದ ಮಂಜುನಾಥ್‌ ಯಾನೆ ಚಿದಾನಂದನನ್ನು ಬಂಧಿಸಲಾಗಿದೆ. ಹೊರ ರಾಜ್ಯದ ಸುಮಾರು 10ಕ್ಕೂ ಅಧಿಕ ಕಾರ್ಮಿಕರು ರೈಲು ನಿಲ್ದಾಣ ಸಮೀಪದ ಫ‌ುಟ್‌ಪಾತ್‌ನಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಅವಘಡ ಸಂಭವಿಸಿದೆ.

ಆರೋಪಿ ಮಂಜುನಾಥ್‌ ವೃತ್ತಿಯಲ್ಲಿ ರಿಕ್ಷಾ ಚಾಲಕ. ಜತೆಗೆ ರೈಲು ನಿಲ್ದಾಣದಲ್ಲಿ ಪಾರ್ಸೆಲ್‌ಗ‌ಳನ್ನು ಸಾಗಿಸುವ ಕೆಲಸವನ್ನೂ ಮಾಡುತ್ತಿರುತ್ತಾನೆ. ಅಲ್ಲೇ ಪಾರ್ಕ್‌ ಮಾಡಲಾಗಿದ್ದ ಪಾಸೆ‌ìಲ್‌ ಸಾಗಿಸುವ ಕಾರು ಚಲಾಯಿಸಿದ್ದು, ಅದು ನಿಯಂತ್ರಣ ತಪ್ಪಿ ಫ‌ುಟ್‌ಪಾತ್‌ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಚಲಿಸಿತು. ಈ ಸಂದರ್ಭ ಅಲ್ಲಿದ್ದ ಬಹುತೇಕ ಕಾರ್ಮಿಕರು ನಿದ್ದೆಯಲ್ಲಿದ್ದರು. ಅಲ್ಲದೆ ಕಾರಿನ ನಿಜವಾದ ಚಾಲಕ ಕಾರಿನಲ್ಲಿಯೇ ಮಲಗಿದ್ದ. ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next