Advertisement

ಕುರುಗೋಡು: ಏತ ನೀರಾವರಿ ಹೊಂಡಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆ

02:59 PM Jul 30, 2022 | Team Udayavani |

ಕುರುಗೋಡು:  ಏತ ನೀರಾವರಿ ಹೊಂಡಾದಲ್ಲಿ ಯುವತಿಯೊಬ್ಬಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಕೋಳೂರು ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಮೃತ ಹೊಂದಿರುವ ಯುವತಿ (27) ಬಳ್ಳಾರಿಯ ಕೌಲ್ ಬಜಾರ್ ನ ಜಾಗೃತಿ ನಗರದ ನಿವಾಸಿ ಎಂದು ತಿಳಿದು ಗುರುತಿಸಲಾಗಿದೆ. ಈ ಯುವತಿಗೆ ಮದುವೆಯಾಗಿದ್ದು ಮೊದಲನೇ ಗಂಡ ಸಾವನ್ನಪ್ಪಿದ್ದಾನೆ. ಎರಡನೇ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ

ಇನ್ನೂ ಸಾವಿನ ಕಾರಣ ತಿಳಿದು ಬಂದಿಲ್ಲ.   ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನೂ ಮೃತದೇಹ ಪತ್ತೆಯಾದ ಸ್ಥಳದ ಸುತ್ತಮುತ್ತ ರೈತರ ಜಮೀನುಗಳು ಇರುವುದರಿಂದ ರೈತರು ಬೆಳಿಗ್ಗೆ ತಮ್ಮ ಜಮೀನುಗಳಲ್ಲಿ ಇಟ್ಟಿದ್ದ ಬೈಕ್ ಗಳನ್ನು ಪಿಎಸ್ ಐ ಮಣಿಕಂಠ ಕಾಲಿನಿಂದ ಒದ್ದಿದ್ದಾರೆ ಎನ್ನುವ ಆರೋಪವನ್ನು ಮಾಡಿ ಪಿಎಸ್ ಐ ಅಮಾನತಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಪೊಲೀಸರು ನಿಭಾಯಿಸಲು ಲಘು ಲಾಠಿ ಪ್ರಹಾರ  ನಡೆಸಿದ್ದಾರೆ. ಈ ವೇಳೆ ರೈತನೊಬ್ಬನಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ರೈತರು ರಸ್ತೆ ತಡೆದು ಪ್ರತಿಭಟನೆ ಕೈಗೊಂಡ ಪರಿಣಾಮ ಸುಮಾರು 1 ಗಂಟೆ ಗಳ ಕಾಲ ಟ್ರಾಫಿಕ್  ಜಾಮ್‌  ಉಂಟಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next