Advertisement

ಕೊರಟಗೆರೆ: ಜಮೀನಿನಲ್ಲಿ ನೀರು ಹಾಯಿಸುವಾಗ  ಹಾವು ಕಡಿದು ವ್ಯಕ್ತಿ ಸಾವು

07:21 PM Sep 28, 2021 | Team Udayavani |

ಕೊರಟಗೆರೆ: ಜಮೀನಿನಲ್ಲಿ ನೀರು ಹಾಯಿಸುವಾಗ ವಿಷಪೂರಿತ ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತ ಪಟ್ಟಿರುವ ಘಟನೆ ಕೋಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೊರಟಗೆರೆ ತಾಲ್ಲೂಕಿನ ವಜ್ಜನಕುರಿಕೆ ಗ್ರಾಪಂನ ಮೋರಗಾನಹಳ್ಳಿ ಗ್ರಾಮದ ಗಂಗಯ್ಯನವರ ಮಗನಾದ ಚಿಕ್ಕನರಸಯ್ಯ ( 39) ವರ್ಷದ ಎನ್ನುವ ವ್ಯಕ್ತಿಯೇ ಮೃತಪಟ್ಟ ದುರ್ದೈವಿ. ರಾತ್ರಿ ತನ್ನ ಜಮೀನಿನ ಮುಸುಕಿನ ಜೋಳದ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ಚಿಕ್ಕರಸಯ್ಯನಿಗೆ ಕತ್ತಲಲ್ಲಿ ವಿಷಪೂರಿತ ಹಾವು ಕಡಿದಿದೆ. ತಕ್ಷಣ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಭಂದ ಕೋಳಾಲ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ಮಹಾಲಕ್ಷ್ಮಮ್ಮ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next