Advertisement

ಯುವಕನನ್ನು ಕೊಂದು ಮೃತದೇಹವನ್ನು ಫ್ಲ್ಯಾಟ್‌ನಲ್ಲಿ ಬಚ್ಚಿಟ್ಟ ಪ್ರಕರಣ: ಇಬ್ಬರ ಬಂಧನ

06:07 PM Aug 18, 2022 | Team Udayavani |

ಕಾಸರಗೋಡು: ಕೊಚ್ಚಿಯ ಹೊಟೇಲೊಂದರ ಸಿಬಂದಿ, ಮಲಪ್ಪುರಂ ವೆಂಡೂರು ಅಂಬಲಪ್ಪಾಡಿ ಪುತ್ತನ್‌ಪುರ ವೀಟಿಲ್‌ ರಾಮಕೃಷ್ಣನ್‌ ಅವರ ಪುತ್ರ ಸಜೀವ್‌ ಕೃಷ್ಣನ್‌(22) ಅವರನ್ನು ಕೊಲೆಗೈದ ಆರೀಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕೊಲೆ ಮಾಡಿ ಎರ್ನಾಕುಳಂ ಕಾಕನಾಡು ಇನ್ಫೋ ಪಾರ್ಕ್‌ಗೆ ಸಮೀಪದ ಇಡಚ್ಚಿರ ವಲ್ಯಾಟ್‌ ದೇವಸ್ಥಾನದ ಬಳಿಯ ಬಸೋನಿಯ ಫ್ಲ್ಯಾಟ್‌ನ ಹದಿನಾರನೇ ಮಹಡಿಯಲ್ಲಿ ಬಚ್ಚಿದ್ದರು.

ಈ ಸಂಬಂಧ ಪೊಲೀಸರು ಕಲ್ಲಿಕೋಟೆ ಇರಿಙಲ್‌ ಆಯನಿಕ್ಕಾಡ್‌ ಕೋಳಾರಿಕಂಡ ನಿವಾಸಿ, ಪ್ರಸ್ತುತ ಆಯನಿಕ್ಕಾಡ್‌ ಮಡತ್ತಿಲ್‌ ಮುಕ್‌ ಕಳತ್ತಟ್ಟಪುಳದಲ್ಲಿ ವಾಸಿಸುತ್ತಿರುವ ಅರ್ಶಾದ್‌ ಕೆ.ಕೆ.(27), ಕೊಯಿಲಾಂಡಿ ಇರಿಙಲ್‌ ಕುನ್ನುಮ್ಮಲ್‌ ಹೌಸ್‌ನ ಅಶ್ವತ್ಥ್ ಕೆ.(23) ನನ್ನು ಮಂಜೇಶ್ವರ ರೈಲು ನಿಲ್ದಾಣ ಪರಿಸರದಿಂದ ಕಾಸರಗೋಡು ಡಿವೈಎಸ್‌ಪಿ ವಿ.ವಿ. ಮನೋಜ್‌, ಮಂಜೇಶ್ವರ ಎಸ್‌.ಐ. ಅನ್ಸಾರ್‌ ನೇತೃತ್ವದಲ್ಲಿ ಬಂಧಿಸಿದ್ದಾರೆ.

ಇವರಿಂದ 1,560 ಗ್ರಾಂ ಗಾಂಜಾ, 5.20 ಗ್ರಾಂ ಎಂಡಿಎಂಎ ಹಾಗೂ 104 ಗ್ರಾಂ ಹ್ಯಾಶಿಶ್‌ ವಶಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next