Advertisement

ಹುಣಸೂರು: ಕುಡುಕ ಮಗನಿಂದ ಹಲ್ಲೆ –ತಂದೆ ಸಾವು !

08:58 AM May 25, 2022 | Team Udayavani |

ಹುಣಸೂರು ; ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಂದೆ ಮಗನಿಗೆ ತಾಕೀತು ಮಾಡಿದ್ದರು. ಕೋಪಗೊಂಡ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದು,  ಪೆಟ್ಟುತಾಳಲಾರದೆ ತಂದೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಮೇ.24 ರಂದು ನಡೆದಿದೆ.

Advertisement

ಮದ್ಯದ ಅಮಲಿನಲ್ಲಿ ಜನ್ಮ ನೀಡಿದ ಅಪ್ಪನನ್ನೆ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆಯಲ್ಲಿ ನಡೆದಿದೆ. ಗ್ರಾಮದ ದಿ.ದೊಡ್ಡಚನ್ನಯ್ಯರ ಪುತ್ರ ಸಣ್ಣಯ್ಯ(70)ಕೊಲೆಯಾದಾತ, ಈತನ ಪುತ್ರ ಮಹದೇವನೇ ಕೊಲೆ ಆರೋಪಿ.

ಮಹದೇವ ನಿತ್ಯ ಕುಡಿದು ಬಂದು ತಂದೆ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುವುದನ್ನು ಪರಿಪಾಠವಾಗಿಸಿಕೊಂಡಿದ್ದ, ಮೇ.20ರ ಸಂಜೆ ಸಣ್ಣಯ್ಯನ ಮಗ ಮಹದೇವನ ಮನೆಗೆ ಬಂದಾಗ ಮಗಳ ಮದುವೆಯ ಸಾಲ ತೀರಿಸಿಲ್ಲಾ, ಹಣ ಕೊಡು, ಇಲ್ಲವೇ ಜಮೀನು ಬರೆದುಕೊಡು ಎಂದು ತಂದೆಯೊಂದಿಗೆ ಜಗಳ ತೆಗೆದಿದ್ದಾನೆ.

ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ, ಕೆಳಗೆ ಬಿದ್ದಿದ್ದ ತಂದೆಯನ್ನು ಮೊಮ್ಮಕ್ಕಳು ರೂಮಿನಲ್ಲಿ ಮಲಗಿಸಿದ್ದಾರೆ, ಹಲ್ಲೆಯಿಂದ ತೀವ್ರಗಾಯಗೊಂಡಿದ್ದ ಸಣ್ಣಯ್ಯ ಸಾವನ್ನಪ್ಪಿದ್ದಾರೆಂದು ಗ್ರಾಮಸ್ಥರು ನಂಜನಗೂಡಿನಲ್ಲಿರುವ ಮಗಳಿಗೆ ಮಾಹಿತಿ ನೀಡಿದ ಮೇರೆಗೆ ಮೃತ ಸಣ್ಣಯ್ಯನ ಪುತ್ರಿ ಗೌರಮ್ಮ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್.ಪಿ.ಚೇತನ್, ಡಿವೈಎಸ್‌ಪಿ ರವಿಪ್ರಸಾದ್ ಭೇಟಿ ನೀಡಿದ್ದರು. ಇನ್ಸ್ಫೆಕ್ಟರ್ ಚಿಕ್ಕಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next