Advertisement

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

01:14 PM Oct 23, 2021 | Team Udayavani |

ಹೊಸಪೇಟೆ:  ಸೀರೆ ಖರೀದಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ದರೋಡೆಕೋರರು, ಓರ್ವ ಮಹಿಳೆಯನ್ನು ಕೊಲೆಗೈದು, ನಗನಾಣ್ಯ ದೋಚಿ ಪರಾರಿಯಾದ ಘಟನೆ ನಗರದ ರಾಣಿಪೇಟೆಯಲ್ಲಿ ಶುಕ್ರವಾರ ನಡೆದಿದೆ.

Advertisement

ಮದುವೆಗಾಗಿ ಸೀರೆ ಖರೀದಿ ಮಾಡುವರಂತೆ ಮನೆಗೆ ನುಗ್ಗಿದ ಐದಾರು ಜನ ದರೋಡೆಕೋರ ತಂಡ,  ಇಬ್ಬರು ಮಹಿಳೆಯರನ್ನು ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಭುವನೇಶ್ವರಿ(೬೮) ವರ್ಷದ ವೃದ್ದೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕ್ಕ (55) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭುವನೇಶ್ವರಿ ಹಾಗೂ ಶಿವಕ್ಕ ಇಬ್ಬರು ಸಹೋದರಿಯರು, ತಮ್ಮ ಮನೆಯಲ್ಲಿ ಸೀರೆ ವ್ಯಾಪಾರ ಮಾಡಿಕೊಂಡಿದ್ದರು. ಮದುವೆ ಸೀರೆ ಖರೀದಿಗೆ ಬಂದವರಂತೆ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಕಿಟಕಿ, ಬಾಗಿಲು ಭದ್ರಪಡಿಸಿ, ಕೈಕಾಲು ಕಟ್ಟಿ ಹಾಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಭುವನೇಶ್ವರಿ ಎಂಬ ವೃದ್ದೆ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾರೆ. ಶಿವಕ್ಕ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಡಾ.ಕೆ.ಅರುಣ್ ಐದಾರು ಜನರ ದರೋಡೆಕೋರರ ತಂಡ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next