Advertisement

ದಾಂಡೇಲಿ: ಚಾಕುವಿನಿಂದ ಇರಿದು ಹಲ್ಲೆ; ವ್ಯಕ್ತಿ ಆಸ್ಪತ್ರೆಗೆ ದಾಖಲು

12:25 PM Dec 28, 2021 | Team Udayavani |

ದಾಂಡೇಲಿ: ಮನೆ ಕಟ್ಟುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆೆ ನೆರೆ ಮನೆಯ ಯುವಕ ಆಕ್ಷೇಪ ವ್ಯಕ್ತಪಡಿಸಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ನಗರದ ಸಮೀಪದಲ್ಲಿರುವ ಅಂಬೇವಾಡಿ-ನವಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ಅಂಬೇವಾಡಿ ನವಗ್ರಾಮದ ನಿವಾಸಿ ಗೌಸ್ ಖಾನ್ ಪಟೇಲ್ ಎಂಬಾವರೆೆ ಹಳ್ಳೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರು ನವಗ್ರಾಮದಲ್ಲಿರುವ ತನ್ನ ಮನೆಯನ್ನು ಬಿಚ್ಚಿ ಹೊಸ ಮನೆ ಕಟ್ಟುತ್ತಿದ್ದು, ಈ ಬಗ್ಗೆ ನೆರೆ ಮನೆಯ ಕುಮಾರ್ ಎಂಬಾತನು ಪ್ರತಿದಿನ ಜಗಳ ತೆಗೆಯುತ್ತಿದ್ದನಂತೆ. ಇಂದು ಸಂಜೆ ಕೆಲಸಕ್ಕೆ ಹೋಗಿ ಮನೆಗೆ ಹಿಂದಿರುಗಿ ಬರುತ್ತಿರುವಾಗ ಗೌಸ್ ಖಾನ್ ಪಟೇಲ್ ಅವರ ಮೇಲೆ ಏಕಾಏಕಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ತಕ್ಷಣವೆ ಹಲ್ಲೆಗೊಳಗಾದ ಗೌಸ್ ಖಾನ್ ಪಟೇಲ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಹಲ್ಲೆಗೊಳಗಾದ ಗೌಸ್ ಖಾನ್ ಪಟೇಲ್ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next