Advertisement

ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸಾವು

10:22 PM Sep 15, 2021 | Team Udayavani |

ಚಾಮರಾಜನಗರ: ರಸ್ತೆ ಅಪಘಾತದಲ್ಲಿ ಎರಡು ಪ್ರತ್ಯೇಕ ಬೈಕ್‌ಗಳ ಸವಾರರು ಮೃತಪಟ್ಟಿರುವ ಘಟನೆ ತಾಲೂಕಿನ ಹರದನಹಳ್ಳಿ ಫಾರಂ ಬಳಿ ಬುಧವಾರ ಸಂಜೆ ನಡೆದಿದೆ.

Advertisement

ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಮಹೇಶ (23) ಹಾಗೂ ಹುಲ್ಲೇಪುರ ಗ್ರಾಮದ ಮಣಿಕಂಠ (23) ಮೃತರು.  ಮಹೇಶ್ ಮತ್ತು ಮಣಿಕಂಠ ಪ್ರತ್ಯೇಕ ಬೈಕ್‌ಗಳಲ್ಲಿ ಸವಾರಿ ಮಾಡುತ್ತಿದ್ದರು.  ಹರದನಹಳ್ಳಿ ಕೃಷಿ ಫಾರಂ ಬಳಿ ಮಹೇಶ್ ಬೈಕ್ ಚಲಿಸುತ್ತಿದ್ದ ಟ್ಯಾಂಕರ್‌ಗೆ ತಗುಲಿದೆ. ಇದರಿಂದ ಆಯತಪ್ಪಿದ ಮಹೇಶನ ಬೈಕ್ ಮಣಿಕಂಠನ ಬೈಕ್‌ಗೆ  ತಗುಲಿದೆ. ಹೀಗಾಗಿ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಮಹೇಶ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರಗಾಯಗೊಂಡ ಮಣಿಕಂಠನಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next