Advertisement

ಬ್ರಹ್ಮಾವರ: ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಕಾರು ಪತ್ತೆ; ಸುಟ್ಟು ಕರಕಲಾದ ಯುವಕ – ಯುವತಿ

01:47 PM May 22, 2022 | Team Udayavani |

ಬ್ರಹ್ಮಾವರ: ಕಾರೊಂದು ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ರವಿವಾರ ಮುಂಜಾನೆ 3:30 ಹೊತ್ತಿಗೆ ನಡೆದಿದೆ.

Advertisement

ಕಾರಿನಲ್ಲಿ ಯುವಕ – ಯುವತಿ ಇದ್ದು, ಇವರು ನಿನ್ನೆ ಮಂಗಳೂರಿನಿಂದ ಬಾಡಿಗೆ ಕಾರು ಪಡೆದು ವಿವಿಧ ಸ್ಥಳಕ್ಕೆ ಭೇಟಿ ಕೊಟ್ಟು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿದ್ದ ಇಬ್ಬರ ಪರಿಚಯ ಹಾಗೂ ಘಟನೆ ಆಕಸ್ಮಿಕವಾಗಿ ಆಯಿತೋ ? ಅಥವಾ ಆತ್ಮಹತ್ಯೆಯೋ ಎನ್ನುವುದು ತನಿಖೆಯ ಬಳಿಕ ತಿಳಿದು ಬರಬೇಕಿದೆ.

ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next