Advertisement

ಪಾಪ್‌ಕಾರ್ನ್ ಎಣ್ಣೆ ಬಾಟಲಿಗೆ ಉಗುಳಿದ ವ್ಯಾಪಾರಿ?

02:54 PM Jun 12, 2022 | Team Udayavani |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಪಾಪ್‌ಕಾರ್ನ್ ನಡೆಸುವ ವ್ಯಾಪಾರಿಯೊಬ್ಬ ಪಾಪ್‌ಕಾರ್ನ್ ಮಾಡಲು ಬಳಸುವ ಎಣ್ಣೆಗೆ ಮೂರು ಬಾರಿ ಉಗುಳಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ನಯಾಜ್‌ ಎಂಬಾತನನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾಲ್‌ಬಾಗ್‌ ಆವರಣದಲ್ಲಿ ಪಾಪ್‌ಕಾರ್ನ್ ಅಂಗಡಿ ನಡೆಸುವ ನಯಾಜ್‌ ಶನಿವಾರ ಮಧ್ಯಾಹ್ನ ಪಾಪ್‌ಕಾರ್ನ್ ಮಾಡಲು ಬಳಸುವ ಎಣ್ಣೆಯ ಬಾಟಲಿಗೆ ಮೂರು ಎಂಜಲು ಉಗಿದಿದ್ದಾನೆ ಎಂದು ಸ್ಥಳೀಯರು ಆರೋಪಿಸಿ ಪೊಲೀಸ್‌ ಸಹಾಯವಾಣಿಗೆ ದೂರು ನೀಡಿದ್ದರು.

ಈ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ನಯಾಜ್‌ ಮತ್ತು ಎಣ್ಣೆಯ ಬಾಟಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next