Advertisement

ಬೆಂಗಳೂರು: ಪತ್ನಿ, ಮಕ್ಕಳ ಎದುರೇ ವ್ಯಕ್ತಿ ಬರ್ಬರ ಹತ್ಯೆ

12:40 PM Apr 30, 2022 | Team Udayavani |

ಬೆಂಗಳೂರು: ಪತ್ನಿ ಮತ್ತು ಇಬ್ಬರ ಮಕ್ಕಳ ಮನೆಯಲ್ಲಿದ್ದಾಗಲೇ ಖಾಸಗಿ ಕಂಪನಿಯ ಲೆಕ್ಕಪರಿಶೋಧಕರೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ ಮಾಡಿರುವ ದುಷ್ಕೃತ್ಯ ಯಶವಂತಪುರದ ಗುರುವಾರ ಮಧ್ಯ ರಾತ್ರಿ ನಡೆದಿದೆ.

Advertisement

ಎಂ.ಕೆ. ನಗರದಲ್ಲಿ ಕೊಲೆ ಪ್ರಕರಣ ನಡೆದಿದ್ದು, ಇಲ್ಲಿನ ಖಾಸಗಿ ಕಂಪನಿಯ ಲೆಕ್ಕಪರಿಶೋಧಕ ಶಂಕರ್‌ ರೆಡ್ಡಿ (35) ಕೊಲೆಯಾದವರು ಎಂದು ಗುರತಿಸಲಾಗಿದೆ.

ಕೆಲಸ ಮುಗಿಸಿ ಕೊಂಡು ಮನೆಗೆ ಬಂದಿದ್ದ ಶಂಕರ್‌ ರೆಡ್ಡಿ ಅವರನ್ನು ಚಾಕುವಿನಿಂದ ಇರಿದು ತಡರಾತ್ರಿ ಕೊಲೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಪತ್ನಿ, 7 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದರು. ಆ ವೇಳೆಯೇ ಶಂಕರ್‌ ರೆಡ್ಡಿ ಕೊಲೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಕ್ಕಪಕ್ಕದ ಮನೆಯವರಿಂದ ಕೊಲೆ ಕೃತ್ಯ ಬೆಳಕಿಗೆ ಬಂದಿದ್ದು, ಕೃತ್ಯ ನಡೆದ ಸ್ಥಳಕ್ಕೆ ಯಶ ವಂತಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next