Advertisement

ತಂದೆಯ ಸಾಲಕ್ಕಾಗಿ ಮಕ್ಕಳನ್ನು ಮನೆಗೆಲಸಕ್ಕೆ ಇಟ್ಟುಕೊಂಡ!

10:02 AM Jul 29, 2022 | Team Udayavani |

ಬಳ್ಳಾರಿ: ತಂದೆ ಮಾಡಿದ್ದ 30 ಸಾವಿರ ರೂ. ಸಾಲಕ್ಕೆ ಆತನ ಮಕ್ಕಳನ್ನು ಮನೆಗೆಲಸಕ್ಕೆ ಇಟ್ಟುಕೊಂಡಿರುವ ಅಮಾನವೀಯ ಘಟನೆ ನಗರದ ರೂಪನಗುಡಿ ರಸ್ತೆಯ ಮನೆಯೊಂದರಲ್ಲಿ ನಡೆದಿದೆ.

Advertisement

ನಗರದ  ನಾಗರಾಜ  ಅವರು ಸ್ಥಳೀಯ ನಿವಾಸಿ ದಾದಾವಲಿ ಎಂಬವರಿಂದ ಎರಡ್ಮೂರು ವರ್ಷಗಳ ಹಿಂದೆ 30 ಸಾವಿರ ರೂ. ಸಾಲ ಮಾಡಿದ್ದು,  ನಾಗರಾಜ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ನಾಗರಾಜನ ಪತ್ನಿ ಅನಿತಾ ಕಡು ಬಡತನದಲ್ಲೇ ನಾಲ್ವರು ಮಕ್ಕಳೊಂದಿಗೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಇಂಥ ಸಂದರ್ಭದಲ್ಲಿ ದಾದಾವಲಿ ಮತ್ತು ಆತನ ಪತ್ನಿ  ಸಾಲದ ಹಣವನ್ನು  ನೀಡುವಂತೆ ಕೇಳಿದ್ದಾರೆ. ಅಲ್ಲಿ ಇಲ್ಲಿ ಮನೆಗೆಲಸ ಜೀವನ ಸಾಗಿಸುತ್ತಿದ್ದ ಅನಿತಾ, ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದಿದ್ದಾರೆ.  ಆದ್ದರಿಂದ ಆಕೆಯ 15 ವರ್ಷದ ಪುತ್ರ ಹಾಗೂ 9 ವರ್ಷದ ಪುತ್ರಿಯನ್ನು ಮನೆಗೆಲಸಕ್ಕೆ ಇಟ್ಟುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next