Advertisement

ವಿಟ್ಲ: ಬದನಾಜೆಯ ಬಸ್ ತಂಗುದಾಣದಲ್ಲಿ ರಕ್ತದ ಕಲೆ; ಕುಡಿದು ಬಿದ್ದಿರುವ ವ್ಯಕ್ತಿಯದೆಂದು ಶಂಕೆ

12:44 PM Jun 29, 2022 | Team Udayavani |

ವಿಟ್ಲ: ವಿಟ್ಲ ಸಮೀಪದ ಬದನಾಜೆಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ರಕ್ತದ ಕಲೆ ಪತ್ತೆಯಾಗಿ, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.

Advertisement

ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿತ್ತೇ ಅಥವಾ ಅಪಘಾತದಿಂದ ಗಾಯಗೊಂಡವರು ಯಾರಾದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ತನಿಖೆ ನಡೆಸಿದ ಪೊಲೀಸರಿಗೆ ಬದನಾಜೆ ಬಸ್ ತಂಗುದಾಣದಲ್ಲಿದ್ದುದು ನೆಲ್ಲಿಗುಡ್ಡೆಯ ವ್ಯಕ್ತಿಯೆಂದು ತಿಳಿದುಬಂದಿದೆ.

ಈತ ವಿಟ್ಲ ಸಂತೆ ನಡೆಯುವ ಕಟ್ಟಡದ ಬಳಿ ಬಿದ್ದುಕೊಂಡಿದ್ದನೆನ್ನಲಾಗಿದೆ. ವಿಟ್ಲ ಪೊಲೀಸರು ಮಾಹಿತಿ ತಿಳಿದು ಪರೀಕ್ಷಿಸಿದಾಗ ಬದನಾಜೆಯಿಂದ ಆತ ಬಂದಿದ್ದಾನೆಂದು ಖಚಿತವಾಯಿತು. ವಿಟ್ಲಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಹಂಝ ಎಂದು ಆತನನ್ನು ಗುರುತಿಸಲಾಗಿದೆ.

ಈತ ಕಂಠಪೂರ್ತಿ ಅಮಲುಪದಾರ್ಥ ಸೇವಿಸಿ, ಆಯ ತಪ್ಪಿಬಿದ್ದಿರಬೇಕು. ಗಾಯಗೊಂಡ ಆತನ ಶರೀರದಿಂದ ರಕ್ತ ಬಿದ್ದಿರಬೇಕೆಂದು ಊಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next