Advertisement

ಸತತ ಸುರಿಯುತ್ತಿರುವ ಮಳೆ-ಬೆಳೆಗೆ ಆಪತ್ತು

02:25 PM Aug 04, 2022 | Team Udayavani |

ಕಲಬುರಗಿ: ಕಳೆದೆರಡು ದಿನಗಳಿಂದ ಜಿಲ್ಲೆ ಯಾದ್ಯಂತ ಸುರಿಯುತ್ತಿರುವ ಮಳೆ ಬೆಳೆಗೆ ಆಪತ್ತು ತಂದಿದೆ. ಪ್ರಮುಖವಾಗಿ ಅಲ್ಪಾವಧಿ ಬೆಳೆಗಳು ಹಾನಿಗೊಳಗಾಗುತ್ತಿವೆ. ಹದಿನೈದು ದಿನಗಳ ಹಿಂದೆ ಸತತ ಮಳೆಗೆ ಆಗ ತಾನೆ ಬಿತ್ತನೆಯಾಗಿದ್ದ ಬೆಳೆಗಳ ಮೇಲೆದ್ದು ಬರುತ್ತಿರುವಾಗ ಬೆಳೆಗಳು ಮಳೆ ಪೆಟ್ಟು ತಿಂದು ಇನ್ನೇನು ಸ್ವಲ್ಪ ಸುಧಾರಣೆಗೊಂಡು ಮೇಲೆ ಬಂದ ನಂತರ ಈಗ ಸತತ ಸುರಿಯುತ್ತಿರುವ ಮಳೆ ಬೆಳೆಗಳ ಬೇರು ಕೊಳೆಯುವಂತೆ ಮಾಡಿದೆ.

Advertisement

ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ಅದೃಷ್ಟವೇ ಇಲ್ಲ ಎನ್ನುವಂತಾಗಿದೆ. ಬಿತ್ತನೆ ಮಾಡುವಾಗ ಸಮರ್ಪಕವಾಗಿ ಭೂಮಿ ಹಸಿಯಾಗಿರಲಿಲ್ಲ. ಆದರೆ ಧೈರ್ಯ ಮಾಡಿ ರೈತ ಬೀಜ- ಗೊಬ್ಬರ ಹಾಕಿ ಬಿತ್ತನೆ ಮಾಡಿದರೆ, ಇನ್ನೇನು ಮೊಳಕೆಯೊಡೆದು ಮೇಲೆ ಬರುತ್ತಿದ್ದಂತೆ ಬಸವನ ಹುಳು ಕಾಟ ಎದುರಾಯಿತು. ಈ ಸಲ ಸೋಯಾಬಿನ್‌ ಬಿತ್ತನೆ ಹೆಚ್ಚಾಗಿದ್ದು, ದುಬಾರಿ ಬೀಜ ತಂದು ಬಿತ್ತಬೆ ಮಾಡಲಾಗಿದೆ. ಆದರೆ ಮೊಳಕೆಯೊಡೆದು ಮೇಲೆ ಬರುತ್ತಿದ್ದಂತೆ ಚಿಗರಿ ಹಾಗೂ ಹಂದಿಗಳ ಹಲವೆಡೆ ತಿಂದು ಹಾಳು ಮಾಡಿದವು. ಹೀಗೆ ಒಂದಿಲ್ಲ ಒಂದು ನಿಟ್ಟಿನಲ್ಲಿ ಬೆಳೆ ಗಳು ಹಾನಿಗೊಳಗಾಗಿದ್ದು, ಮೇಲೆದ್ದು ಬಾರದಂತಾಗಿದೆ.

ಏಳು ಜೀವ ಹಾನಿ: ಪ್ರಸಕ್ತ ವಾಗಿ ಅತಿಯಾದ ಮಳೆಗೆ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮನೆ ಬಿದ್ದು, ನೀರಲ್ಲಿ ಕೊಚ್ಚಿಕೊಂಡು ಹಾಗೂ ನೀರಲ್ಲಿ ಮುಳುಗಿ ಜಿಲ್ಲೆಯಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಐದು ಜನರಿಗೆ ಈಗಾಗಲೇ ಪ್ರಕೃತಿ ವಿಕೋಪ ನಿಧಿ ಅಡಿ ಪರಿಹಾರ ನೀಡಲಾಗಿದೆ. ಅದೇ ರೀತಿ ಮಳೆಗೆ 18 ಜಾನುವಾರಗಳು ಬಲಿಯಾಗಿವೆ. ಪ್ರಮುಖವಾಗಿ ಸಾವಿರ ಮನೆಗಳು ಭಾಗಶಃ ಹಾನಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next