Advertisement
ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸೇರಿ ಗಣ್ಯರು ಭಾಗಿಯಾಗಿದ್ದರು.
ಯೋಗಿ ಅವರು ಬಂದಿದ್ದು ಹೆಮ್ಮೆ ಮತ್ತು ಬಹಳಷ್ಟು ಸಂತೋಷವಾಗಿದೆ. ಕರ್ನಾಟಕಕ್ಕೂ ಅವರಿಗೂ ಸಂಬಂಧವಿದೆ. ಉತ್ತರ ಕರ್ನಾಟಕ ಮತ್ತು ಈ ಭಾಗದಲ್ಲಿ ಅವರ ಎಲ್ಲರ ಮನದಲ್ಲಿ ಇದ್ದಾರೆ. ಯಾಕೆಂದರೆ ಅವರು ಮೊದಲು ಗುರುಗಳಾಗಿದ್ದರು. ನಮ್ಮ ಸಮಾಜದಲ್ಲಿ ಗುರುಗಳಿಗೆ ಉನ್ನತ ಸ್ಥಾನವಿದೆ. ಇವರು ನಡೆದಂತೆ ನಡೆದಿದ್ದಾರೆ. ಒಬ್ಬರು ಸ್ವಾಮೀಜಿ ದಕ್ಷ ಆಡಳಿತಗಾರ ಎಂದು ತೋರಿಸಿದ್ದಾರೆ ಎಂದರು. ಆಧ್ಯಾತ್ಮಿಕತೆ ಮತ್ತು ಆಡಳಿತ (Spirituality and administration)ಎರಡು ಮಾಡಬಹುದು ಎಂದು ಯೋಗಿ ತೊರಿಸಿಕೊಟ್ಟಿದ್ದಾರೆ.ದುಷ್ಟರಿಗೆ ರಕ್ಷಣೆ ಇಲ್ಲ, ಶಿಷ್ಟರಿಗೆ ಪರಿಪಾಲನೆ ಆಗುತ್ತಿದೆ. ಕನ್ನಡ ನಾಡಿಗೆ ಬಹಳ ಸಂತೋಷವಾಗಿದೆ ಎಂದರು.
Related Articles
Advertisement
ನಿರ್ಮಾಲನಂದ ಶ್ರೀಗಳು ಸಹ ಸಾಕಷ್ಟು ಉತ್ತಮ ಕೆಲಸ ಮಾಡ್ತಿದ್ದಾರೆ. ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಬಡವರ ಪರ ಕೆಲಸ ಮಾಡ್ತಿದ್ದಾರೆ.ಇವತ್ತಿನ ದಿನಮಾನಗಳಲ್ಲಿ ನಾವು ವೈಜ್ಞಾನಿಕವಾಗಿ ಆಧ್ಯಾತ್ಮಿಕವಾಗಿ ಬಯಸುವ (we want scientific spiritually) ಗುರುಗಳು ಬೇಕು.ಆ ಗುರುಗಳು ನಮಗೆ ಸಿಕ್ಕಿದ್ದಾರೆ ಎಂದರು.