Advertisement
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಧಿಕಾರ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆ-2019, ಚೈಲ್ಡ್ ಲೈನ್ಸೇ ದೋಸ್ತಿ ಜಿಲ್ಲಾ ಮಕ್ಕಳ ಹಕ್ಕುಗಳ ಜಾಗೃತಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಾಂವಿಧಾನಿಕ ನಿಯಮಾವಳಿಗಳ ಪಾಲನೆ ಅಗತ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅಸುರಕ್ಷಿತ ವಲಯದ ಮಕ್ಕಳ ರಕ್ಷಣೆ ಅತ್ಯಗತ್ಯ. ಮುಕ್ತ ಅಭಿಪ್ರಾಯಗಳ ವಿನಿಮಯ ಪ್ರಯತ್ನ ಅತ್ಯಗತ್ಯವಾಗಿದ್ದು, ಎಲ್ಲ ಮಕ್ಕಳಿಗೂ ಸಾಂವಿಧಾನಿಕವಾಗಿ ಶಿಕ್ಷಣ, ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಅವಕಾಶಗಳು ದೊರೆಯಬೇಕು.
Related Articles
Advertisement
ಕಾರ್ಯಕ್ರಮಕ್ಕೆ ಚಾಲನೆ ನೀಡಿದಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಜೆ.ರಾಜೇಂದ್ರ, ಮಕ್ಕಳನ್ನು ಅಸುರಕ್ಷಿತ ಪ್ರದೇಶಗಳಿಂದ ರಕ್ಷಿಸಿ ಸುಭದ್ರ ಬದುಕನ್ನು ನೀಡುವುದು ಎಲ್ಲರ ಕರ್ತವ್ಯವಾಗಬೇಕು. ದೇಶ ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಎಲ್ಲ ಮಕ್ಕಳು ಸಮರ್ಥನೀಯ ಹಾಗೂ ಸಮಾನ ಅವಕಾಶದ ಬದುಕನ್ನು ಪಡೆಯುವುದು ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ ಎಂದರು.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶು ಪಾಲ .ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಮಕ್ಕಳ ಸಹಾಯವಾಣಿ ಉಪಕೇಂದ್ರದ ನಿರ್ದೇಶಕಿ ಅಮಲಿ ನಾಯ್ಕ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೆ„ಟಿ ಯೋಜನಾ ನಿರ್ದೇಶಕ ಸುಬ್ಬರಾವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನಿತಾ ಲಕ್ಷ್ಮೀ ಮಕ್ಕಳ ಸಹಾಯವಾಣಿ ಕೋಲಾಬ್ ಸಂಸ್ಥೆ ನಿರ್ದೇಶಕ ಗೋಪಿನಾಥ್,ಜಿಲ್ಲಾ ಸಂಯೋಜಕ ಎಸ್.ಪಿ.ಮಂಜುನಾಥ್, ಸಂಯೋಜಕ ಶ್ರೀನಿವಾಸ್, ದಿನೇಶ್, ಪ್ರೌ ಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್ ಮತ್ತಿತರರು ಪಾಲ್ಗೊಂಡಿದ್ದರು. ಅತಿಥಿಗಳಿಗೆ ಮಕ್ಕಳು ಚೈಲ್ಡ್ ಲೈನ್ ಸೇ ದೋಸ್ತಿ ಬರಹದ ಸಂಕಲ್ಪ ಕಂಕಣ ತೊಡಿಸಿದರು.