Advertisement
ಇಲ್ಲಿನ ನೌಕಾನೆಲೆಯ ಆವರಣದಲ್ಲಿ ಏರ್ಪಟ್ಟ ಸಮಾರಂಭದಲ್ಲಿ ಅವರು ವಸತಿ ಸಂಕೀರ್ಣಗಳನ್ನು ನೇವಿ ಸೇಲರ್ಸ ಮತ್ತು ಅವರ ಕುಟುಂಬದವರಿಗೆ ಅರ್ಪಿಸಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ನೌಕಾ ಸಿಬ್ಬಂದಿ ಮತ್ತು ರಕ್ಷಣಾ ನಾಗರಿಕರ ಕುಟುಂಬಗಳು ಸಾಕ್ಷಿಯಾಗಿದ್ದವು.
Related Articles
ಹತ್ತು ಹಲವು ಅಭಿವೃದ್ಧಿಗೆ ಕಾರಣವಾಗಿದೆ. ಹಲವು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಯಾಗಿವೆ. ಯೋಜನೆಯು ಆತ್ಮನಿರ್ಭರ ಭಾರತದೊಂದಿಗೆ ಹೊಲಿಸಬಹುದು ಎಂದರು. ದೇಶೀಯವಾಗಿ ಶೇ.90 ಕ್ಕಿಂತ ಹೆಚ್ಚಿನ ವಸ್ತುಗಳನ್ನು ನಿರ್ಮಾಣದಲ್ಲಿ ಬಳಸಲಾಗಿದೆ.
Advertisement
ಉನ್ನತ ಗುಣಮಟ್ಟದ ರಕ್ಷಣಾ ಮೂಲಸೌಕರ್ಯಗಳು ಪ್ರಾಜೆಕ್ಟ್ ಸೀಬರ್ಡ್ ನಲ್ಲಿ ಆಗುತ್ತಿರುವುದನ್ನು ಈ ನಿಟ್ಟಿನಲ್ಲಿ ನಡೆದ ಪ್ರಯತ್ನವನ್ನು ನೌಕಾದಳ ಮುಖ್ಯಸ್ಥ ಹರಿ ಕುಮಾರ್ ಶ್ಲಾಘಿಸಿದರು.ಇಲ್ಲಿ ಆಗಬೇಕಾದ ಉಳಿದ ಸೌಲಭ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅವರು ಸಂಬಂಧಿತರಿಗೆ ಸೂಚಿಸಿದರು.
ಆರಂಭದಲ್ಲಿ ನೇವಿ ಮುಖ್ಯಸ್ಥ ಹರಿ ಕುಮಾರ್ ಅವರನ್ನು ಕರ್ನಾಟಕ ನೇವಿ ಕಮಾಂಡರ್ ಸ್ವಾಗತಿಸಿದರು. ನೇವಿಯ ವಿವಿಧ ವಿಭಾಗದ ಮುಖ್ಯಸ್ಥರು,ಹಿರಿಯ ನೇವಿ ಅಧಿಕಾರಿಗಳು, ಸೀಬರ್ಡ ನೌಕಾನೆಲೆ ಸಿಬ್ಬಂದಿ ಉಪಸ್ಥಿತರಿದ್ದರು.