Advertisement

ಲೋಕಾರ್ಪಣೆ ಮುಂದೂಡಿಕೆ 

12:11 PM Nov 26, 2018 | Team Udayavani |

ಬಂಟ್ವಾಳ: ನಟ, ಮಾಜಿ ಸಚಿವ ಅಂಬರೀಷ್‌ ನಿಧನ ಹಿನ್ನೆಲೆಯಲ್ಲಿ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಜರಗಬೇಕಿದ್ದ ಬಿ.ಸಿ. ರೋಡ್‌ ಇಂದಿರಾ ಕ್ಯಾಂಟೀನ್‌ ಉದ್ಘಾಟನೆಯನ್ನು ಮುಂದೂಡಲಾಗಿದೆ. ಉದ್ಘಾಟನೆಗೆ ರವಿವಾರ ದಿನ ನಿಗದಿ ಮಾಡಲಾಗಿತ್ತು. ಮುಂದಿನ ದಿನಾಂಕ ನಿಗದಿಪಡಿಸಬೇಕಿದೆ.

Advertisement

ಆವರಣ ಗೋಡೆ ಬದಲು ಸ್ಟೀಲ್‌ ತಡೆಗಳ ನಿರ್ಮಾಣ, ನೆಲಕ್ಕೆ ಸಿಮೆಂಟ್‌ ಹಾಸು ಅಳವಡಿಸುವ ಮೂಲಕ ನ. 24ರಂದು ರಾತ್ರಿಯೂ ಭರದ ಕೆಲಸ ನಡೆದಿತ್ತು. ರಾಜ್ಯ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರಿಂದ 94ಸಿ, 94ಸಿಸಿ ಹಕ್ಕುಪತ್ರ ವಿತರಣೆಯ ಕಾರ್ಯಕ್ರಮವೂ ಮುಂದೂಡಿದ್ದಾಗಿ ತಹಶೀಲ್ದಾರ್‌ ಪುರಂದರ ಹೆಗ್ಡೆ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next