Advertisement

ವಿಮಾನದಲ್ಲಿ ನಿಯಮ ಉಲ್ಲಂಘನೆ: 3 ದಿನದಲ್ಲಿ 3 ಪ್ರಯಾಣಿಕರ ಬಂಧನ

10:44 PM Jan 29, 2023 | Team Udayavani |

ನವದೆಹಲಿ: ವಿಮಾನ ಪ್ರಯಾಣ ವೇಳೆ ನಿಯಮಗಳನ್ನು ಪಾಲಿಸದಿರುವ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು, ಕಳೆದ 3 ದಿನಗಳಲ್ಲೇ 3 ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ.

Advertisement

ವರದಿಗಳ ಪ್ರಕಾರ, ನಾಗ್ಪುರದಿಂದ-ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಲ್ಯಾಂಡ್‌ ಆಗುವ ಮುನ್ನವೇ ತುರ್ತು ನಿರ್ಗಮನ ದ್ವಾರ ತೆರೆದ ಆರೋಪದ ಮೇರೆಗೆ ಪ್ರಣವ್‌ ರಾವತ್‌ ಎಂಬಾತನನ್ನು ಬಂಧಿಸಲಾಗಿದೆ. ಅದಕ್ಕೂ ಮುನ್ನ ಆಕಾಶ ಏರ್‌ ವಿಮಾನದಲ್ಲಿ, ಸಹ ಪ್ರಯಾಣಿಕನೊಂದಿಗೆ ಗಲಾಟೆ ಮಾಡಿದ ಹಿನ್ನೆಲೆ ಚೆನ್ನೈ ಮೂಲದ ಜಯರಾಜ್‌ ಸೆಲ್ವರಾಜ್‌ ಎಂಬವರನ್ನು ಬಂಧಿಸಲಾಗಿದೆ.

ಜತೆಗೆ ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ, ಮುಂಬೈ ಮೂಲದ ಉದ್ಯಮಿಯೊಬ್ಬರು ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next