Advertisement

ಗುಂಡಿಟ್ಟು ಮಹಿಳಾ ಅಧಿಕಾರಿ ಹತ್ಯೆ: ಹಿಮಾಚಲಪ್ರದೇಶದ ಕಸೌಲಿಯಲ್ಲಿ ಘಟನೆ

06:00 AM May 03, 2018 | Team Udayavani |

ಶಿಮ್ಲಾ/ನವದೆಹಲಿ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿ  ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 

Advertisement

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹೊಟೇಲ್‌ ಒಂದು ಒತ್ತುವರಿ ಮಾಡಿರುವ ಜಮೀನು ತೆರವು ಮಾಡಲು ಜಿಲ್ಲಾ ನಗರ ಮತ್ತು ಪಟ್ಟಣ ಸಹಾಯಕ ಅಧಿಕಾರಿ ಶೈಲ್‌ಬಾಲಾ ಶರ್ಮಾ ತೆರಳಿದ್ದರು. ಸಂದರ್ಭದಲ್ಲಿ  ಮಾಲೀಕ ಶೈಲ್‌ಬಾಲಾ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಸುಪ್ರೀಂಕೋರ್ಟ್‌ ಅದನ್ನು ಗಂಭೀರವಾಗಿಯೇ ಪರಿಗಣಿಸಿ “ನೀವು ಜನರನ್ನು ಕೊಲ್ಲುತ್ತಾ ಹೋದರೆ ನಾವು ಆದೇಶ ನೀಡುವುದನ್ನು ನಿಲ್ಲಿಸುತ್ತೇವೆ’ ಎಂದು ನ್ಯಾ. ಎಂ.ಬಿ.ಲೋಕುರ್‌, ನ್ಯಾ.ದೀಪಕ್‌ ಗುಪ್ತಾರನ್ನೊಗಳಗೊಂಡ ಪೀಠ ಪ್ರಶ್ನಿಸಿತು. ಪೊಲೀಸರೇನು ಮಾಡುತ್ತಿದ್ದರು ಎಂದು ಪ್ರಶ್ನಿಸಿತು. ಈ ವಿಚಾರವನ್ನು ಸಿಜೆಐ  ನೇತೃತ್ವದ ಪೀಠಕ್ಕೆ ತಂದು ಮುಂದಿನ ವಿಚಾರಣೆಯನ್ನು ಯಾವ ಪೀಠಕ್ಕೆ ವಹಿಸಬೇಕು ಎಂಬ ಬಗ್ಗೆ ಅವರೇ ತೀರ್ಮಾನಿಸಲಿದ್ದಾರೆ ಎಂದಿತು.

Advertisement

Udayavani is now on Telegram. Click here to join our channel and stay updated with the latest news.

Next