Advertisement

ಇಷ್ಟಕ್ಕೆ ವಿರುದ್ಧವಾದ ಮದುವೆ: ತೇಜ್‌ 

06:00 AM Nov 04, 2018 | Team Udayavani |

ಪಾಟ್ನಾ: ಮದುವೆಯಾಗಿ ಆರು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಜೇಷ್ಠ ಪುತ್ರ ತೇಜ್‌ ಪ್ರತಾಪ್‌ ಯಾದವ್‌, ವಿಚ್ಛೇದನದ ಹಿಂದಿನ ಕಾರಣ ಬಹಿರಂಗಪಡಿಸಿದ್ದಾರೆ. ಪಾಟ್ನಾ ಸಿವಿಲ್‌ ನ್ಯಾಯಾಲಯದಲ್ಲಿ ಶುಕ್ರವಾರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಯಾದವ್‌, ಬೋಧ್‌ ಗಯಾದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. 

Advertisement

ಪತ್ನಿ ಐಶ್ವರ್ಯಾ ರಾಯ್‌ ಸುಸಂಸ್ಕೃತ ಹೆಣ್ಣಾಗಿದ್ದರೂ, ಆಕೆಯನ್ನು ಮದುವೆಯಾಗಲು ತಮಗೆ ಇಷ್ಟವಿರಲಿಲ್ಲ. ಆದರೂ, ತಮ್ಮ ಇಚ್ಛೆಗೆ ವಿರುದ್ಧವಾಗಿ ತಮಗೆ ಮದುವೆ ಮಾಡಲಾಯಿತು. ಆಗಿನಿಂದ ಈವರೆಗೆ ತಾವು ಉಸಿರುಗಟ್ಟುವಂಥ ವಾತಾವರಣದಲ್ಲಿ ಜೀವಿಸುತ್ತಿದ್ದುದಾಗಿ ಯಾದವ್‌ ತಿಳಿಸಿದ್ದಾರೆ. ಅಲ್ಲದೆ, ವಿಚ್ಛೇದನಕ್ಕಾಗಿ ಸಲ್ಲಿಸಿರುವ ಮನವಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಸಿದ್ಧನಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯಾದವ್‌ ಅರ್ಜಿ ನ.29ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next