Advertisement
ಸಾಮಾನ್ಯವಾಗಿ ಮಾರ್ಚ್ 31ರಂದು ದರ ಪರಿಷ್ಕರಣೆ ಆದೇಶ ಮಾಡಲಾಗುತ್ತದೆ. ಆದರೆ, ಬೆಸ್ಕಾಂ ತಾನು ಸಲ್ಲಿಸಿದ ಪ್ರಸ್ತಾವನೆಯನ್ನು ಫೆಬ್ರವರಿ 16ರಂದು ದಿಢೀರ್ ತಿದ್ದುಪಡಿ ಮಾಡಿದ್ದರಿಂದ ಗ್ರಾಹಕರಿಗೆ ಮತ್ತೆ 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಮಾರ್ಚ್ 24ರಂದು ಈ ಸಂಬಂಧದ ವಿಚಾರಣೆಯ ಕೂಡ ಮುಗಿದಿದೆ. ಈಗ ಎಷ್ಟು ಪರಿಷ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆ ನಡೆದಿದೆ ಎಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.
ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಪ್ರತಿ ಯೂನಿಟ್ಗೆ 1.40 ರೂ. ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಬಂದಿದ್ದ ಆಕ್ಷೇಪಣೆಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಬಹುತೇಕ ಏಪ್ರಿಲ್ ಮೊದಲ ವಾರದಲ್ಲಿ ದರ ಪರಿಷ್ಕರಣೆ ಆದೇಶ ಹೊರಬೀಳುವ ಸಾಧ್ಯತೆ ಇದೆ. ಏಪ್ರಿಲ್ 12ಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆಗೆ ಮತದಾನ ನಡೆಯಲಿದೆ. ಅದಕ್ಕೂ ಮುನ್ನವೇ ದರ ಪರಿಷ್ಕರಣೆ ಆದೇಶವಾಗುವ ಸಂಭವವಿದೆ.
Related Articles
ವರ್ಷ ಎಸ್ಕಾಂಗಳು ಕೇಳಿದ್ದು ಕೆಇಆರ್ಸಿ ಅನುಮೋದಿಸಿದ್ದು
2011-12 88 23
2012-13 73 13
2013-14 70 23
2014-15 66 32
2015-16 80 13
2016-17 1.02 ರೂ. 48
Advertisement