Advertisement

‘ಜೈಲ್ ಭರೋ’ ಚಳವಳಿಗೆ ಸಿದ್ಧರಾಗಿ ; ಬೆಂಬಲಿಗರಿಗೆ ಇಮ್ರಾನ್ ಖಾನ್ ಕರೆ

09:11 PM Feb 04, 2023 | Team Udayavani |

ಲಾಹೋರ್: ತನ್ನ ಪಕ್ಷದ ನಾಯಕರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುತ್ತಿರುವ ಮತ್ತು ಹೊಸದಾಗಿ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಲು ವಿಳಂಬ ಮಾಡುತ್ತಿರುವ ಫೆಡರಲ್ ಸರ್ಕಾರದ ವಿರುದ್ಧ ‘ಜೈಲ್ ಭರೋ ತೆಹ್ರೀಕ್’ ಗೆ ಸಿದ್ಧರಾಗುವಂತೆ ಪಾಕಿಸ್ಥಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.

Advertisement

ಶನಿವಾರ ತಮ್ಮ ಝಮಾನ್ ಪಾರ್ಕ್ ನಿವಾಸದಿಂದ ದೂರದರ್ಶನದ ಭಾಷಣದಲ್ಲಿ ಉಚ್ಚಾಟಿತ ಪ್ರಧಾನಿ ಈ ಹೇಳಿಕೆಗಳನ್ನು ಮಾಡಿದರು.

ಪಕ್ಷದ ಹಿರಿಯ ಉಪಾಧ್ಯಕ್ಷ ಫವಾದ್ ಚೌಧರಿ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ಶಂದನಾ ಗುಲ್ಜಾರ್ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ ಕೆಲವು ದಿನಗಳ ನಂತರ ಈ ರೀತಿ ಕಿಡಿ ಕಾರಿದ್ದಾರೆ.

‘ಜೈಲ್ ಭರೋ ತೆಹ್ರೀಕ್’ಗಾಗಿ ನನ್ನ ಕರೆಗಾಗಿ ಸಿದ್ಧರಾಗಿ ಕಾಯುವಂತೆ ನಾನು ಜನರನ್ನು ಕೇಳುತ್ತೇನೆ. ಅವರೆಲ್ಲರನ್ನೂ ಹೊಂದಲು ಪಾಕಿಸ್ಥಾನದ ಜೈಲುಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲ”ಎಂದು ಖಾನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next