Advertisement

ಬೆಳ್ತಂಗಡಿ: ನದಿ ನೀರಿನ ಸ್ವಚ್ಛತೆಗೆ ಬೇಕಿದೆ ಸ್ಥಳೀಯಾಡಳಿತದ ನಿಗಾ

03:26 PM Apr 02, 2024 | Team Udayavani |

ಬೆಳ್ತಂಗಡಿ: ವಿಪರೀತ ತಾಪಮಾನ ಏರಿಕೆಯಿಂದ ಜಲಕ್ಷಾಮ ಉಂಟಾಗುವ ಅಪಾಯ ಎದುರಾಗಿದೆ. ನದಿ ನೀರಿನ ಮಟ್ಟ ಇಳಿಕೆಯಾಗಿದ್ದರೂ ಅಲ್ಲಲ್ಲಿ ಚೆಕ್‌ಡ್ಯಾಮ್‌ಗಳು ಇರುವ ಪರಿಣಾಮ ನೀರಡಿಕೆ ತಣಿಸುವಂತೆ ಮಾಡಿದೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಶಿಶಿಲ,ಸಂಗಮ ಕ್ಷೇತ್ರ ಪಜಿರಡ್ಕ, ಕೇಲ್ಕರ ಸೇರಿದಂತೆ ನದಿ ಅಂಚಿನ ತಿರ್ಥ ಕ್ಷೇತ್ರಗಳಿವೆ. ಇಲ್ಲಿನ ಅನೇಕ ಕಡೆಗಳಲ್ಲಿ ಮತ್ಸ್ಯತೀರ್ಥವಾಗಿ ಪ್ರವಾಸಿ ಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಪ್ರಖ್ಯಾತ ಶಿಶಿಲ ದೇವಾಲಯಕ್ಕೆ ದಿನ ನಿತ್ಯ ಭಕ್ತರು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನ ದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ. ಆದರೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ.

ರಾಸಾಯನಿಕಯುಕ್ತ ಅರಳು
ಇತ್ತೀಚಿನ ದಿನಗಳಲ್ಲಿ ಎಲ್ಲ ಆಹಾರಗಳು ರಾಸಾಯನಿಕಯುಕ್ತವಾಗಿವೆ. ಅದರಲ್ಲೂ ಮತ್ಸ್ಯಗಳಿಗೆ ನೀಡುವ ಅರಳುಗಳಲ್ಲೂ
ರಾಸಾಯನಿಕ ಸೇರಿಕೊಂಡಿದೆ ಎಂಬ ಅನುಮಾನ ಮೂಡತೊಡಗಿದೆ. ಇದರ ಪರಿಣಾಮ ಶಿಶಿಲದಲ್ಲಿ ಮೀನುಗಳ
ಆಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಮತ್ತು ನೀರೂ ಕಲುಷಿತ ಮಾಡಬಲ್ಲ ಅರಳನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಭಕ್ತರು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಮತ್ಸ್ಯ ಹಿತರಕ್ಷಣ
ವೇದಿಕೆ ವಿನಂತಿ ಮಾಡಿದೆ. ಹೀಗಾಗಿ ನದಿ ನೀರು ಕಲುಶಿತ ವಾಗದಂತೆ ತಾಲೂಕು ಆಡಳಿತ ಪ್ರತಿ ಗ್ರಾ.ಪಂ.ಗಳಿಗೆ ಅಗತ್ಯ ಕ್ರಮಕ್ಕೆ ಆಧ್ಯತೆ ನೀಡುವ ಅನಿವಾರ್ಯತೆಯಿದೆ.

ಪ್ರವಾಸಿಗರ ಸಂಖ್ಯೆ ಕುಸಿತ

ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಸೋಧ್ಯಮಕ್ಕೆ ಇನ್ನಿಲ್ಲದ ಬೇಡಿಕೆಯಿದೆ. ಆದರೆ ಬಿರು ಬಿಸಿಲಿನ ತಾಪಮಾನಕ್ಕೆ ಪ್ರವಾಸಿಗರು ಇ ಸುಳಿಯುತ್ತಿಲ್ಲ. ಪ್ರಮುಖ ಆಕರ್ಷಣೆಯಾಗಿರುವ ದಿಡುಪೆ, ಎರ್ಮಾಯಿ, ಬಂಡಾಜೆ ಜಲಪಾತಗಳು ಬಹುತೇಕ ಬತ್ತಿಹೋಗುವ ಅಂಚಿನಲ್ಲಿದೆ. ಹೀಗಾಗಿ ದಿನವೊಂದಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಜಲಪಾತಗಳು ತೀವ್ರ ಬತ್ತಿರುವುದರಿಂದ ದಿನಕ್ಕೆ  ಹೆಚ್ಚೆಂದರೆ 50 ಮಂದಿ ಸೇರುವುದು ಕಡಿಮೆ ಎಂಬಂತಾಗಿದೆ. ಈ ಮಧ್ಯೆ ನೇತ್ರಾವತಿ, ಮೃತ್ಯುಂಜಯ, ನಗರಕ್ಕೆ ಮುಖ್ಯ ನೀರಿನ ಆಶ್ರಯವಾಗಿರುವ ಸೋಮಾವತಿ ನದಿಗಳು ಬತ್ತುವ
ಅಂಚಿನಲ್ಲಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.

Advertisement

ತಾಲೂಕಿನಲ್ಲಿ ನದಿ ನೀರಿನಮಟ್ಟ ಕ್ಷೀಣಿಸಿರುವುದು ಕಂಡುಬಂದಿದೆ. ಗ್ರಾ.ಪಂ. ಸಹಿತ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಅಭಾಯ ಕಂಡುಬಂದಲ್ಲಿ ಸ್ಥಳೀಯ ನಿಧಿ ಬಳಕೆ ಮಾಡಿ ನೀರಿನ ವ್ಯವಸ್ಥೆಗೆ ಸೂಚಿಸಲಾಗಿದೆ. ನದಿ ನೀರು ಕಲುಷಿತಗೊಳಿ ಸುವವರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು.
-ಪೃಥ್ವಿ ಸಾನಿಕಮ್‌, ತಹಶೀಲ್ದಾರ್‌

ನದಿಯ ಮೀನುಗಳಿಗೆ ಅತಿಯಾದ ಆಹಾರ ನೀಡುವುದರಿಂದ ನೀರು ಕಲುಷಿತವಾಗಿ ದೇವರ ಮೀನುಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಅರಿತ ದೇವಾಲಯದ ಆಡಳಿತ, ಮೀನುಗಳಿಗೆ ಭಕ್ತರು ಅರಳು ಹಾಕುವುದನ್ನು ನಿಷೇಧ ಮಾಡಿದೆ. *

ಜಯರಾಮ ನೆಲ್ಲಿತ್ತಾಯ,

ಮತ್ಸ್ಯ ಹಿತರಕ್ಷಣಾ ವೇದಿಕೆ
ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next