Advertisement

Impassable Road; ಸ್ಟ್ರೆಚರ್‌ನಲ್ಲಿ ರೋಗಿಯ ಹೊತ್ತು ಸಾಗಿದ ಆ್ಯಂಬುಲೆನ್ಸ್‌ ಸಿಬಂದಿ

11:57 PM Sep 22, 2023 | Team Udayavani |

ಉಪ್ಪಿನಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರ ಮನೆ ತನಕ 108 ಆ್ಯಂಬುಲೆನ್ಸ್‌ ಸಂಚರಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ 108 ಸಿಬಂದಿ ಸುಮಾರು 1ಕಿ.ಮೀ. ದೂರದ ತನಕ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಬಂದು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿರಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Advertisement

ಇಲ್ಲಿನ ದೇವರಮಾರು ನಿವಾಸಿ ಕಮಲಾ ಶುಕ್ರವಾರ ಅನಾರೋಗ್ಯದಿಂದ ಬಳಲಿದಾಗ ಅವರ ಪುತ್ರ 108ಕ್ಕೆ ಕರೆ ಮಾಡಿದ್ದರು. ದುರ್ಗಮ ರಸ್ತೆ ಮತ್ತು ಕೆಸರಿನಿಂದಾಗಿ ಅವರ ಮನೆಗೆ ಆ್ಯಂಬುಲೆನ್ಸ್‌ ಬರಲು ಸಾಧ್ಯವಾಗಿಲ್ಲ. ಕೊನೆಗೆ ಆ್ಯಂಬುಲೆನ್ಸ್‌ ಸಿಬಂದಿ ಮನೆಗೆ ಬಂದು ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸ್ಥಳೀಯರ ನೆರವಿನಿಂದ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಆ್ಯಂಬುಲೆನ್ಸ್‌ ನಿಂತ ಸ್ಥಳದವರೆಗೆ ತಂದರು.

ಅಲ್ಲಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮಂಗಳೂರಿನ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್‌ನ ಸಿಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next