ಮನೆಮದ್ದುಗಳನ್ನು ಬಳಸಿ ನಮ್ಮ ದೇಹದರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತೇ? 4-5 ತುಳಸಿ ಎಲೆಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ, ಆನೀರನ್ನು ಕುದಿಸಬೇಕು. ನಂತರ ಅದಕ್ಕೆ ಸ್ವಲ್ಪ ಕಾಳುಮೆಣಸನ್ನುಹುಡಿ ಹಾಗೂ ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪತಣ್ಣಗಾದ ಬಳಿಕ ಈ ಪಾನೀಯವನ್ನು ಸೇವಿಸಿ.
ಕೊತ್ತಂಬರಿ ಬೀಜ, ಜೀರಿಗೆ,ಕಾಳುಮೆಣಸು, ದಾಲಿcàನಿ, ಲವಂಗ, ಏಲಕ್ಕಿ ಹುಡಿ ಮಾಡಿಇಟ್ಟುಕೊಳ್ಳಬೇಕು. ಒಂದು ಚಮಚ ಹುಡಿಯನ್ನು ಹಾಲಿಗೆ ಹಾಕಿ, ಸ್ವಲ್ಪ ಬೆಲ್ಲ,ಅರಿಶಿನ,ಶುಂಠಿ ಸೇರಿಸಿ ಕುದಿಸಿ ಕಷಾಯ ಮಾಡಬೇಕು. ಇದನ್ನು ನಿತ್ಯ ಸೇವಿಸಿದರೆ ಒಳ್ಳೆಯದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.ಸಾರಿಗೆ ಒಗ್ಗರಣೆ ಹಾಕುವ ಸಂದರ್ಭದಲ್ಲಿ ಬೆಳ್ಳುಳ್ಳಿ ಬಳಸಿಯೂ ಸೇವಿಸಬಹುದು. ಬೇಯಿಸಿದ ಅನ್ನದ ಗಂಜಿಯನ್ನು ಕುಡಿಯುವುದು ಆರೋಗ್ಯಕರ. ಬೇಕಿದ್ದರೆ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಈರುಳ್ಳಿಯನ್ನು ಹಾಕಬಹುದು.