Advertisement

ಅನೈತಿಕ ಸಂಬಂಧ: ಗಂಡನನ್ನೇ ಕೊಂದ ಪತ್ನಿ , ಪ್ರಿಯಕರ ಬಂಧನ

05:46 PM Jul 14, 2022 | Team Udayavani |

ಶಹಾಪುರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತನ್ನ ಗಂಡನನ್ನೇ ಕೊಂದು ಪ್ರಿಯತಮನೊಂದಿಗೆ ಪರಾರಿಯಾಗಿದ್ದ ಪತ್ನಿ ಮತ್ತು ಪ್ರಿಯಕರನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮೂಲತಃ ಜೇವರ್ಗಿ ತಾಲೂಕಿನ ದಂಡಸೋಲಾಪುರ ಗ್ರಾಮದ ಸಿದ್ದು ಬಾಬು ದೇಸಾಯಿ (28) ಪತ್ನಿ ಕಮಲಾ ಮತ್ತು ಪ್ರಿಯಕರ ಹೆಳವರ್‌ ನಿಂದ ಕೊಲೆಯಾದವ.

ಈತ ಕಮಲಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಜೇವರ್ಗಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಬದುಕು ಸಾಗಿಸುತ್ತಿದ್ದ. ಈ ವೇಳೆ ಕಮಲಾ ತನ್ನದೇ ಗ್ರಾಮದ ಸುರೇಶ ನಿಂಗಪ್ಪ ಹೆಳವರ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಪತಿ ಸಿದ್ದುಗೆ ಕೆಲ ದಿನಗಳ ನಂತರ ತಿಳಿದು ಕೋಪಗೊಂಡು ಮನೆಯಲ್ಲಿ ಪತ್ನಿ ಜೊತೆ ಜಗಳವಾಡಿದ್ದ. ನಂತರ ಕೆಲವರ ಸಮ್ಮುಖದಲ್ಲಿ ಸಮಾಧಾನಗೊಂಡು ಶಹಾಪುರದ ಗಂಗಾ ನಗರಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ಆದರೆ ಇಲ್ಲಿಗೂ ಬಂದ ಪ್ರಿಯಕರ ಸುರೇಶ ಹೆಳವರ್‌ ಮತ್ತು ಪತ್ನಿ ಕಮಲಾ ಅಕ್ರಮ ಸಂಬಂಧ ಮುಂದುವರೆದಿತ್ತು. ತಮ್ಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಮುಗಿಸುವ ಆಲೋಚನೆ ಮಾಡಿ ಪತ್ನಿ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ಪತಿ ಸಿದ್ದು ಮನೆಯಲ್ಲಿ ಮಲಗಿರುವಾಗ ಕೊಲೆ ಮಾಡಿದ್ದರು. ನಂತರ ಶವವನ್ನು ಸುರೇಶ ತನ್ನ ಸ್ನೇಹಿತ ಚಿತಾಪುರ ತಾಲೂಕಿನ ಇಂಗಳಿಗಿ ಗ್ರಾಮದ ಮಂಜುನಾಥ ಸ್ವಾಮಿ ಎಂಬಾತನ ಸಹಾಯದೊಂದಿಗೆ ದೋರನಹಳ್ಳಿ ಸಮೀಪದ ಕಾಲುವೆ ಸಮೀಪ ಎಸೆದಿದ್ದರು ಎನ್ನಲಾಗಿದೆ.

ನಂತರ ಠಾಣೆಗೆ ಹಾಜರಾದ ಪತ್ನಿ, ತನ್ನ ಪತಿ ಸಿದ್ದು ದೇಸಾಯಿ ಕಾಣೆಯಾಗಿದ್ದಾನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಕುರಿತು ಸಂಶಯಗೊಂಡ ಸಿದ್ದು ದೇಸಾಯಿ ಅವರ ಸಂಬಂಧಿ ಬಸಪ್ಪ ಟಣಕೆದಾರ ಶಹಾಪುರ ಠಾಣೆಗೆ ಈ ಕುರಿತು ತೀವ್ರ ತನಿಖೆ ಮೂಲಕ ಸತ್ಯ ಬಯಲಾಗಬೇಕಿದೆ ಎಂದು ದೂರು ಸಲ್ಲಿಸಿದ್ದರು. ನಂತರ ಪ್ರಕಣ ತಿರುವು ಪಡೆದುಕೊಂಡು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆರೋಪಿಗಳು ಶವವನ್ನು ದೋರನಹಳ್ಳಿ ಸಮೀಪದ ಕಾಲುವೆ ಬಳಿ ಬೀಸಾಡಿರುವುದನ್ನು ತೋರಿಸಿದ್ದಾರೆ.

Advertisement

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಡಿವೈಎಸ್‌ಪಿ ಮಂಜುನಾಥ, ಪಿಐ ಶ್ರೀನಿವಾಸ ಅಲ್ಲಾಪುರೆ ಸೇರಿದಂತೆ ಇತರರು ಸ್ಥಳ ಪರಿಶೀಲನೆ ನಡೆಸಿದರು. ಜು. 11ರಂದು ಪ್ರಕರಣವನ್ನು ಪರಿವರ್ತಿಸಿ ಕೊಲೆಗೈದ ಪತ್ನಿ ಕಮಲಾ ಮತ್ತು ಸುರೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next