Advertisement

ಅಮೃತಸಿಟಿ ಯೋಜನೆಯ ಪಾರ್ಕಿಂಗ್ ಜಾಗಕ್ಕೆ ಅಡ್ಡಿಯಾಗಿದ್ದ ನಾಲ್ಕು ಮಳಿಗೆಗಳ ನೆಲಸಮ

03:33 PM Mar 25, 2023 | Team Udayavani |

ಗಂಗಾವತಿ: ನಗರದ ಎಸ್‌ಬಿಎಚ್ ಬ್ಯಾಂಕ್ ಹತ್ತಿರ ದುರ್ಗಮ್ಮನ ಹಳ್ಳಕ್ಕೆ ಅಮೃತ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ವಾಹನ ನಿಲುಗಡೆ ಜಾಗಕ್ಕೆ ಹೋಗಲು ಅಡ್ಡಿಯಾಗಿದ್ದ ಅಕ್ರಮ ನಾಲ್ಕು ಮಳಿಗೆಗಳನ್ನು ನಗರಸಭಾ ಸಿಬ್ಬಂದಿಯವರು ಶನಿವಾರ ಬೆಳಗ್ಗೆ ತೆರವು ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದ್ದಾರೆ.

Advertisement

ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲಾಗಿದೆ ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಖಾಸಗಿಯವರು ನಗರಸಭೆ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳು ಕಳೆದಿದ್ದವು. ಹಲವು ಭಾರಿ ತೆರವುಗೊಳಿಸುವಂತೆ ನಗರಸಭೆಯಿಂದ ಸೂಚನೆ ನೀಡಿದ್ದರೂ ಮಳಿಗೆಗಳ  ಮಾಲೀಕರು ಶನಿವಾರ ಬೆಳಗ್ಗೆ ನಗರಸಭೆ ಕಾನೂನು ಕ್ರಮ ಕೈಗೊಂಡು ಅಮೃತ ಸಿಟಿ ಯೋಜನೆ ನಿರ್ಮಿಸಿರುವ ಪಾರ್ಕಿಂಗ್ ಜಾಗಕ್ಕೆ ಹೋಗಲು ಜೆಸಿಬಿ ಮೂಲಕ ಅಕ್ರಮ ಮಳಿಗೆಗಳನ್ನು ನೆಲಸಮ ಮಾಡಲಾಯಿತು.

ಈ ಸಂದರ್ಭದಲ್ಲಿ  ಮಳಿಗೆಗಳ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರೂ ನಗರಸಭೆಯ ಅಧಿಕಾರಿಗಳು ಕ್ಯಾರೆ ಎನ್ನದೆ ಮಳಿಗೆಗಳನ್ನು ನೆಲಸಮ ಮಾಡಲಾಯಿತು.

ಈ ಸಂದರ್ಭದಲ್ಲಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ,ಅಭಿಯಂತರದ ಶಂಕರಗೌಡ ನಾಗರಾಜ ಚೇತನ್ ಕುಮಾರ್ ಸೇರಿದಂತೆ ನಗರಸಭೆಯ ಹಲವು ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next