Advertisement

ಗೊಬ್ಬರದೊಂದಿಗೆ ಬೀಟೆ ಮರ ಅಕ್ರಮ ಸಾಗಾಟ: ವಶ

12:36 AM May 28, 2023 | Team Udayavani |

ಮಡಿಕೇರಿ: ಗೊಬ್ಬರ ಚೀಲ ಮುಚ್ಚಿಕೊಂಡು ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಸಿಬಂದಿ ಪತ್ತೆಹಚ್ಚಿದ್ದಾರೆ.

Advertisement

ಮರಗೋಡುವಿನಲ್ಲಿ ಗೊಬ್ಬರ ಚೀಲ ಮುಚ್ಚಿಕೊಂಡು ತೆರಳುತ್ತಿದ್ದ ಲಾರಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಬೀಟೆ ಮರಗಳು ಇರುವುದು ಪತ್ತೆಯಾಗಿದೆ.
ಸುಮಾರು 2 ಲಕ್ಷ ರೂ. ಮೌಲ್ಯದ ಮರ, ಲಾರಿ ಸೇರಿ ಒಟ್ಟು 22 ಲಕ್ಷದ ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಲಾರಿ ಚಾಲಕ ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಷಿನ್‌ ಭಾಷಾ, ವಲಯ ಅರಣ್ಯಾಧಿಕಾರಿ ಹನುಮಂತ ರಾಜು, ಮೂರ್ನಾಡು ಉಪ ವಲಯದ ಉಪವಲಯ ಅರಣ್ಯಾಧಿಕಾರಿ ಬಿ.ಎಚ್‌. ಸಚಿನ್‌ ಸೇರಿ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next