Advertisement

ಅಕ್ರಮ ಹುಲಿ ಉಗುರು ಮಾರಾಟಕ್ಕೆ: ಇಬ್ಬರ ಬಂಧನ

12:58 PM Aug 18, 2022 | Team Udayavani |

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ರಸ್ತೆಯಲ್ಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನಗರದ ಕೆ.ಪಿ.ಮೊಹಲ್ಲಾದ ಫರ್ಹಾದ್ ಉರ್ ರೆಹಮಾನ್ (33) ಮತ್ತು ಯಾಸಿರ್ ಅರಾಫತ್ (19) ಬಂಧಿತರು. ಇವರಿಂದ 8 ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಆಧರಿಸಿ ನಗರದ ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹದೇವಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಮಾದೇಶ್ ಹಾಗೂ ಸಿಬ್ಬಂದಿ ಖರೀದಿದಾರರಂತೆ ನಟಿಸಿ ದಾಳಿ ಮಾಡಿದ್ದರು. ಬಳಿಕ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು 3.50 ಲಕ್ಷ ರೂ. ಬೆಲೆಬಾಳುವ 8 ಹುಲಿ ಉಗುರುಗಳನ್ನು ವಶಪಡಿಸಿಕೊಂಡರು.

ಇದನ್ನೂ ಓದಿ:ಮೂಡಿಗೆರೆ: ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ

ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಚಾಮರಾಜನಗರ ವಲಯಾರಣ್ಯಾಧಿಕಾರಿ ವಶಕ್ಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಸೈಬರ್ ಠಾಣೆಯ ಸಿಬ್ಬಂದಿ ರಾಜು, ಮಂಜುನಾಥ, ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಹೇಮಂತಕುಮಾರ್, ಜಗದೀಶ್ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next