Advertisement

ಸರಕಾರಿ ಭೂಮಿ ಖರೀದಿ ಆರೋಪ: ಜೂನ್‌ 14ರಂದು ಮುಂಢೆ ಮೇಲ್ಮನವಿ ವಿಚಾರಣೆ

09:53 AM Jun 14, 2019 | Team Udayavani |

ಹೊಸದಿಲ್ಲಿ : ಸರಕಾರಿ ಭೂಮಿಯನ್ನು ತಾನು ಕಾನೂನು ಬಾಹಿರವಾಗಿ ಖರೀದಿಸಿದ್ದೇನೆಂಬ ಆರೋಪಕ್ಕೆ ಸಂಬಂಧಿಸಿ ತನ್ನ ವಿರುದ್ಧ ಕೇಸು ದಾಖಲಿಸುವಂತೆ ಬಾಂಬೆ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಮಹಾರಾಷ್ಟ್ರ ಎಂಎಲ್‌ಸಿ ಧನಂಜಯ್‌ ಮುಂಢೆ ಸಲ್ಲಿಸಿರುವ ಮೇಲ್ಮನವಿಯನ್ನು ಜೂನ್‌ 14ರಂದು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಇಂದು ಗುರುವಾರ ಒಪ್ಪಿಕೊಂಡಿದೆ.

Advertisement

ಬೀಡ್‌ ಜಿಲ್ಲೆಯ ಅಂಬಾ ಜೊಗಾಯ್‌ ನ ಪುಸ್‌ ಗ್ರಾಮದಲ್ಲಿ ಎಂಎಲ್‌ಸಿ ಧನಂಜಯ್‌ ಮುಂಢೆ ಅವರು ಕಾನೂನು ಬಾಹಿರವಾಗಿ ಸರಕಾರಿ ಭೂಮಿಯನ್ನು ಖರೀದಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್‌, ಪೊಲೀಸರಿಗೆ ಆದೇಶ ನೀಡಿತ್ತು.

ಈ ಆದೇಶಕ್ಕೆ ತಡೆ ನೀಡಬೇಕೆಂಬ ಮುಂಢೆ ಅವರ ಮೇಲ್ಮನವಿಯನ್ನು ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್‌ ಅಜಯ್‌ ರಸ್ತೋಗಿ ಅವರನ್ನು ಒಳಗೊಂಡ ರಜಾಕಾಲದ ಪೀಠ ಪುರಸ್ಕರಿಸಿ ಇದರ ವಿಚಾರಣೆಯನ್ನು ಜೂನ್‌ 14ರ ಶುಕ್ರವಾರದಂದು ತಾನು ಕೈಗೆತ್ತಿಕೊಳ್ಳುವುದಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next