Advertisement

15ದಿನಗಳಲ್ಲಿ 4 ಪ್ರಕರಣ ಪತ್ತೆ; 20ಕ್ಕೂ ಅಧಿಕ ಆರೋಪಿಗಳ ಬಂಧನ

09:58 PM Mar 23, 2019 | |

ವಿಶೇಷ ವರದಿ- ಕೋಟ:  ಅಕ್ರಮ ಮರಳುಗಾರಿಕೆ, ಕಲ್ಲುಗಣಿಗಾರಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಇಂತಹ ಅಡ್ಡೆಗಳಿಗೆ  ದಾಳಿ ನಡೆಸುತ್ತಿದ್ದಾರೆ. 

Advertisement

ಕಳೆದ 15ದಿನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣಗಳು ನಡೆದಿದ್ದು, 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಇನ್ನೂ ಹಲವಾರು ಕಡೆಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು ಸಾಲು-ಸಾಲು ಪ್ರಕರಣಗಳು ಮಾ. 20ರಂದು ಬೆಳಗಿನ ಜಾವ ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ  ದಕ್ಕೆಗೆ ಕೋಟ ಪೊಲೀಸರು ಕಂದಾಯ ಇಲಾಖೆಯ ಅಧಿಕಾರಿಗಳ ಜತೆಗೆ  ದಾಳಿ ನಡೆಸಿ ಟೆಂಪೋ ಹಾಗೂ ಮರಳು, ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದರು.ಆದರೆ ಆರೋಪಿ ಮಂಜು ಠಾಣೆಯಲ್ಲೇ ಪೊಲೀಸರ ಕೈತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಮಾ. 3ರಂದು ಪೋಲಿಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಸ್ಥಳೀಯರ ಮಾಹಿತಿಯಾಧರಿಸಿ ಕಾರ್ಕಳದ ಎಎಸ್‌ಪಿ ಕೃಷ್ಣಕಾಂತ್‌ ನೇತƒತ್ವದಲ್ಲಿ ವಿಶೇಷ ತಂಡದ ಮೂಲಕ ಮೊಳಹಳ್ಳಿ ಕೈಲ್ಕೆರೆ ಅಕ್ರಮ ಮರಳುಗಾರಿಕೆ  ದಕ್ಕೆಗೆ ತಡರಾತ್ರಿ ದಾಳಿ ನಡೆಸಿದ್ದು,  ಈ ಸಂದರ್ಭ 10 ದೋಣಿ,1 ಲಾರಿ, 2 ಕಾರುಗಳನ್ನು ವಶಕ್ಕೆ ಪಡೆದು ಮರಳು ತೆಗೆಯುವ ಕಾರ್ಮಿಕರು ಸೇರಿದಂತೆ 20ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು.

ಮಾ. 13ರಂದು ಬಿಲ್ಲಾಡಿ ಸಮೀಪ ಬನ್ನೇರಳಕಟ್ಟೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಮರಳು ದಕ್ಕೆಗೆ ಪೊಲೀಸರು ದಾಳಿ ನಡೆಸಿ ಮರಳು ಹಾಗೂ ಸಾಗಾಟಕ್ಕೆ ಬಳಸಿದ ಟೆಂಪೋವನ್ನು ವಶಕ್ಕೆ ಪಡೆದಿದ್ದರು ಹಾಗೂ ಪೊಲೀಸರನ್ನು ನೋಡಿ ಚಾಲಕ ಮತ್ತು ಕೆಲಸಗಾರರು ಸ್ಥಳಿದಿಂದ ಪರಾರಿಯಾಗಿದ್ದರು.

ಮಾ. 22ರಂದು ನೈಲಾಡಿಯಲ್ಲಿ ಕಪ್ಪುಕಲ್ಲು ಕೋರೆಯ ಮೇಲೆ ದಾಳಿ ನಡೆದಿದ್ದು, ಲಾರಿ, ಕಂಪ್ರೇಷರ್‌ ಹಾಗೂ ಗಣಿಗಾರಿಕೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.

Advertisement

ಮರುಕಳಿಸುತ್ತಿರುವ ಪ್ರಕರಣಗಳು
ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 2017ರಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದೆ ಹಾಗೂ 23ಕ್ಕೂ ಹೆಚ್ಚು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,
ಇದೀಗ ಕೋಟ ಠಾಣೆಯ ಆವರಣದಲ್ಲಿ ದೋಣಿಗಳ ರಾಶಿ ಕಾಣಸಿಗುತ್ತದೆ. ಜತೆಗೆ ಇನ್ನೂ ಹಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆದಿದೆ. ಆದರೆ ಅಕ್ರಮ ಚಟುವಟಿಕೆಗಳು ಮಾತ್ರ ನಿಂತಿಲ್ಲ.

ಗ್ರಾಮಾಂತರ ಭಾಗದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚು-ಹೆಚ್ಚು ನಡೆಯುತ್ತಿದ್ದು, ಕೆಲವೊಂದು ಗ್ರಾಮಗಳು ಠಾಣೆಯಿಂದ  ಸಾಕಷ್ಟು  ದೂರದಲ್ಲಿದರಿಂದ ಇಂತಹ ಚಟುವಟಿಕೆಗಳನ್ನು ಮಟ್ಟಹಾಕಲು ಕಷ್ಟ ಸಾಧ್ಯವಾಗುತ್ತಿದೆ ಎನ್ನಲಾಗಿದೆ.

ದೂರು ನೀಡಿ;  ಕ್ರಮಕೈಗೊಳ್ಳುತ್ತೇವೆ
ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಲಾಖೆ ಎಲ್ಲಾ  ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳೀಯರು ತಮ್ಮ ಪರಿಸರದಲ್ಲಿ ನಡೆಯುವ ಅಕ್ರಮದ ಕುರಿತು ಗಣಿಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಅಕ್ರಮ ತಡೆಗಟ್ಟುವಲ್ಲಿ ವಿಫಲರಾದರೆ ಜಿಲ್ಲಾ ಮಟ್ಟದಿಂದ ಸೂಕ್ತ ತಂಡವನ್ನು ನಿಯೋಜಿಸಿ ಕ್ರಮಕೈಗೊಳ್ಳುತ್ತೇವೆ ಎನ್ನುವುದು ಪೊಲೀಸ್‌ ಹಾಗೂ ಗಣಿ ಇಲಾಖೆಯ ಉನ್ನತ ಅಧಿಕಾರಿಗಳ ಭರವಸೆಯ ಮಾತುಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next