Advertisement

ತೈಲಗೆರೆಯಲ್ಲಿ ಅಕ್ರಮ ಗಣಿಗಾರಿಕೆ: ಆಕ್ರೋಶ

03:33 PM Sep 02, 2021 | Team Udayavani |

ದೇವನಹಳ್ಳಿ: ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಸ್ಥಳೀಯರು ಮತ್ತು ರೈತರು ಏಕಾಏಕೀ ಮುತ್ತಿಗೆ ಹಾಕಿ ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.

Advertisement

ಗಣಿ ಅಧಿಕಾರಿಗಳ ಭೇಟಿ: ತೈಲಗೆರೆ ಗ್ರಾಮದ ಸರ್ವೇ ನಂ.110ರಲ್ಲಿ ನಡೆಯುತ್ತಿದ್ದ ಗಣಿ ಗಾರಿಕೆ ಖಂಡಿಸಿ ರೈತರು ಪ್ರತಿಭಟನೆ ತೀವ್ರ ಗೊಳಿಸುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಭೇಟಿ ನೀಡಿ ಗಣಿಗಾರಿಕೆ ಪ್ರದೇಶದ ಸ್ಥಳ ಪರಿಶೀಲಿಸಿದರು.

ಗಣಿಗಾರಿಕೆ ವಿರುದ್ಧ ಕಿಡಿ: ತಾಲೂಕಿನ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಧೂಳು, ಅಂತರ್ಜಲ ಕೊರತೆ ಹೀಗೆಹಲವು ರೀತಿಯ ತೊಂದರೆಯಾಗುತ್ತಿದೆ. ಇದರಿಂದ ನಷ್ಟವನ್ನು ಅನು ಭವಿಸುತ್ತಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಬಾರದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಪೊಲೀಸರ ರಾಜಿ ಸಂಧಾನ: ಕೆಲ ಕಾಲ ರೈತರು ಮತ್ತು ಗಣಿ (ಕ್ರಷರ್‌ ಮಾಲಿಕರು) ಮತ್ತು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿನಡೆಯಿತು. ಸ್ಥಳಕ್ಕೆವಿಶ್ವನಾಥಪುರ ಪೊಲೀಸರುಮತ್ತುವಿಜಯಪುರ ವೃತ್ತ ನಿರೀಕ್ಷಕ ಟಿ.ಶ್ರೀನಿವಾಸ್‌ ಭೇಟಿ ನೀಡಿ, ಗಣಿಗಾರಿಕೆಗೆಸಂಬಂಧಿಸಿದಂತೆ ಪದೇ ಪದೇ ನಡೆಯುತ್ತಿರುವುದಕ್ಕೆ ತೆರೆ ಎಳೆಯಬೇಕೆಂದು ಸಭೆ ಕರೆಯುವ ಸಲಹೆ ನೀಡಿದರು.

ಇದನ್ನೂ ಓದಿ:ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

Advertisement

ದೂರುಗಳ ಸರಮಾಲೆ: ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡದ ಬಳಿ ಸ್ಥಳೀಯರು ಸಮಸ್ಯೆ ಹೇಳಿಕೊಂಡರು. ಇತ್ತೀಚೆಗೆ ನಂದಿಬೆಟ್ಟದಲ್ಲಿ ಭೂ ಕುಸಿತವಾಗಿದೆ. ತೈಲಗೆರೆ ಮೇಲೆ ಗಣಿಗಾರಿಕೆ ದುಷ್ಪರಿಣಾಮ ಬೀರಿದೆ. ಕಲ್ಲು ಗಣಿಗಾರಿಕೆಯಿಂದ ನಮ್ಮ ಬೆಳೆಗಳು ಹಾನಿಗೀಡಾಗಿದೆ. ಬಂಡೆ ಸಿಡಿಸಲು ಸಿಡಿಮದ್ದು, ಗ್ರಾನೆಡ್‌ ಕಡ್ಡಿಯಂತಹ ಸ್ಫೋಟಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮನೆಗಳು ಬಿರುಕು ಬಿಟ್ಟಿವೆ.ಕಲ್ಲುಗಣಿಗಾರಿಕೆಗೆಅನುಮತಿ ಕೊಡಬಾರದು. ಕಲ್ಲು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಸಂಚಾರದಿಂದಾಗಿ ಇಲ್ಲಿನ ರಸ್ತೆಗಳು ಹದಗೆಟ್ಟಿವೆ ಎಂದು ಅಧಿಕಾರಿಗಳಿಗೆ ದೂರು ನೀಡಿದರು.

ಈ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರೇಣುಕಾ, ಭೂ ವಿಜ್ಞಾನಿಗಳಾದ ವಿಕ್ರಮ್‌, ಮೂರ್ತಿ, ಎಇಇ ರಾಜಶೇಖರ್‌, ತಾಲೂಕು ಸಹಾಯಕಿ ಸವಿತಾ, ವಿಶ್ವನಾಥಪುರ ಠಾಣೆಯ ಪಿಎಸ್‌ಐ ವೆಂಕಟೇಶ್‌, ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ, ಆರ್‌ಐ ಚಿದಾನಂದ್‌, ಕ್ರಷರ್‌ ಮಾಲಿಕರು,ಸಿಬ್ಬಂದಿ, ರೈತ ಮುಖಂಡರು, ಸ್ಥಳೀಯರು ಇದ್ದರು.

ಅಕ್ರಮ ನಡೆದಿದ್ದರೇ ಕ್ರಮ ಜರುಗಿಸುವೆ
ತೈಲಗೆರೆ ಸರ್ವೆ ನಂಬರ್‌ 110ರಲ್ಲಿ 55 ಎಕರೆ ಪ್ರದೇಶದಲ್ಲಿ 14 ಮಂದಿ ಗಣಿಗಾರಿಕೆ ಗುತ್ತಿಗೆ ಪಡೆದಿದ್ದುಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡ್ತಿದ್ದಾರೆ. ಗಣಿಗಾರಿಕೆ ಪ್ರದೇಶದ ಸುತ್ತಲು ಫೆನ್ಸಿಂಗ್‌ಅಳವಡಿಸಿ,ನಾಮಫ‌ಲಕಹಾಕಲಾಗಿದೆ.ಗಣಿಗಾರಿಕೆಯಿಂದತೊಂದರೆಯಾಗಿದ್ದರೇ ತಾಂತ್ರಿಕ ವರದಿ ಪಡೆದು ಪರಿಶೀಲಿಸಲಾಗುತ್ತದೆ. ಲೀಸ್‌ನಿಂದ ರಾಜಧನ ಕಳೆದ ವರ್ಷ 11ಕೋಟಿ 50ಲಕ್ಷ , ಈ ವರ್ಷ 2ಕೋಟಿ 70ಲಕ್ಷ ರೂ. ರಾಜಧನ ಹರಿದು ಬಂದಿದೆ. ಡಿಸ್ಟ್ರಿಕ್ಟ್ ಮಿನರಲ್‌ ಫೌಂಡೇಷನ್‌ ಟ್ರಸ್ಟ್‌ ಮೂಲಕ ಪ್ರತಿ ಟನ್‌ಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ. ಕಳೆದ ವರ್ಷ 16ಲಕ್ಷ ಈ ವರ್ಷ 5ಲಕ್ಷ ರೂ.ಬಂದಿರುತ್ತದೆ. ಅಕ್ರಮ ಗಣಿಗಾರಿಕೆ ನಡೆಸಿದ್ದರೇ ಕ್ರಮ ಜರುಗಿಸುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ
ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಹೇಳಿದರು

ಅಕ್ರಮ ಗಣಿಗಾರಿಕೆ ಮಾಡಿಲ್ಲ
ಗಣಿಗಾರಿಕೆಯಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ಫೋಟಕ ಬಳಸಲಾಗುತ್ತಿದೆ. ಇದಕ್ಕೆ ತಾಂತ್ರಿಕ ತಜ್ಞರನ್ನು ನೇಮಿಸಲಾಗಿದೆ. ಸ್ಫೋಟಿಸುವ ಮುನ್ನಾ ಎಲ್ಲ ರೀತಿಯ ಸುರಕ್ಷಾಕ್ರಮ ಅನುಸರಿಸಲಾಗುತ್ತಿದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದುಕೊಂಡು ಮಾಡಲಾಗುತ್ತಿದೆ. ಸ್ಫೋಟಕ ಬಳಕೆಗೆ 4 ವರ್ಷದ ಹಿಂದೆ ಕೇಂದ್ರ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಮಾಡಿಲ್ಲ. ಎಲ್ಲಾ ದಾಖಲೆ ಇಟ್ಟು ಕೊಂಡೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ ಮಾಲಿಕರ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್‌ ಜೈನ್‌ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next