Advertisement

ಸುಳ್ಯ: ಅಕ್ರಮ ಮದ್ಯ ಮಾರಾಟ; ಆರೋಪಿಗಳು ದೋಷಮುಕ್ತಿ

08:41 PM May 05, 2022 | Team Udayavani |

ಸುಳ್ಯ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇರೆಗೆ ಸುಳ್ಯದ ಪೊಲೀಸರು ದಿನೇಶ, ರವೀಶ್‌ನ‌ನ್ನು ಬಂಧಿಸಿ ಉಳಿದ ಇಬ್ಬರು ಆರೋಪಿಗಳಾದ ಪ್ರಕಾಶ ಹಾಗೂ ರದೀಶರ ವಿರುದ್ಧ ಕಾನುನು ಕ್ರಮ ತೆಗೆದುಕೊಂಡು ಇಬ್ಬರು  ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

Advertisement

ಎಲ್ಲ ಆರೋಪಿಗಳ ವಿರುದ್ಧ‌ ದೋಷರೋಪಣ ಪಟ್ಟಿಯನ್ನು ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಸಲ್ಲಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ  ಹಿರಿಯ ಸಿವಿಲ್‌ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್‌  ಅವರು ಆರೋಪಿಗಳ ವಿರುದ್ಧ ಅಭಿಯೋಜನೆಯು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫ‌ಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ  ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್‌ ಬಿ.ಜಿ., ಶ್ಯಾಮ್‌ ಪ್ರಸಾದ್‌, ಮನೋಜ್‌ ವಕಾಲತ್ತು ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next