Advertisement
ಹಳ್ಳಿಗಳಲ್ಲಿ ರಾಜಾರೊಷವಾಗಿ ಮದ್ಯ ಮಾರಾಟ ದಂಧೆ ಕಣ್ಣಿಗೆ ಕಾಣಿಸುತ್ತಿದ್ದರೂ, ತಮಗೆ ಏನೂ ಗೊತ್ತಿಲ್ಲದಂತೆ ಈ ಅಧಿಕಾರಿಗಳು ನಿದ್ರಗೆ ಜಾರಿದ್ದು, ಇವರ ನಿರ್ಲಕ್ಷ್ಯತನವೇ ಗ್ರಾಮೀಣ ಸಮುದಾಯದ ಕುಟುಂಬ ಬೀದಿಪಾಲು ಮಾಡುತ್ತಿದೆ.
Related Articles
Advertisement
ರಾಜಾರೋಷವಾಗಿ ಮದ್ಯ ಮಾರಾಟ: ಸರ್ಕಾರದ ಪರವಾನಗಿ ಹೊಂದಿದ್ದರೆ ಮಾತ್ರ ಮದ್ಯ ಮಾರಾಟ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬೀಡಿ ಅಂಗಡಿಗಳಲ್ಲಿ, ಪಟ್ಟಣದ ಹಲವು ಡಾಬಾಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವುದು ರಾಜಾ ರೋಷವಾಗಿ ನಡೆಯುತ್ತಿದೆ. ಆದರೂ, ಇವರಿಗೆ ಕಡಿವಾಣ ಹಾಕುವವರು ಯಾರೂ ಇಲ್ಲದಂತಾಗಿದೆ.
ಅಕ್ರಮ ಮದ್ಯದಿಂದ ಕುಟುಂಬ ಬೀದಿಪಾಲು: ಕೂಲಿ ಮಾಡಿ ಬದುಕು ಸಾಗಿಸುವ ಬಡವರು, ಕೃಷಿ ಕಾರ್ಮಿಕರು ಪ್ರತಿನಿತ್ಯ ತಾವು ದುಡಿದ ಕೂಲಿ ಹಣ ಮದ್ಯ ಕುಡಿದು ಹಾಳು ಮಾಡುತ್ತಿರುವುದರಿಂದ ಆ ಕುಟುಂಬಗಳು ಗೋಳು ಹೇಳ ತೀರದಾಗಿದೆ. ಹಲವು ಕುಟುಂಬಗಳು ಅಕ್ರಮ ಮದ್ಯದಿಂದ ಕುಟುಂಬ ಬೀದಿ ಪಾಲಾಗುವ ಸ್ಥಿತಿಗೆ ಬಂದು ನಿಂತಿವೆ. ಬಾರ್ ಮಾಲೀಕರ ಒತ್ತಡದಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದನ್ನು ಇಲಾಖೆ ಅಧಿಕಾರಿಗಳು ಕೈ ಬಿಟ್ಟಿದ್ದಾರೆ ಎಂಬುದು ಸಾರ್ವಜನಿಕರ ಆರೋಪ ವಾಗಿದೆ. ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.
ಡಾಬಾಗಳಲ್ಲಿ ಮದ್ಯ ಮಾರಾಟ: ಅಕ್ರಮ ಮದ್ಯ ಮಾರಾಟದ ದಂಧೆ ಹಳ್ಳಿಗಳಲ್ಲಿ ಮಾತ್ರವಲ್ಲದೆ, ಪಟ್ಟಣದ ಪ್ರದೇಶದ ಪ್ರತಿ ಡಾಬಾಗಳಲ್ಲೂ ನಡೆಯುತ್ತಿದೆ. ಪ್ರತಿ ತಿಂಗಳು ಸ್ಪರ್ಧೆ ಎನ್ನುವಂತೆ ಹಲವು ಡಾಬಾಗಳು ಹುಟ್ಟಿ ಕೊಳ್ಳುತ್ತಲಿವೆ. ಕೆಲ ಡಾಬಗಳಲ್ಲಿ ಮದ್ಯ ಮಾರಾ ಟದ ಅನುಮತಿ ಇಲ್ಲವಾದರೂ, ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಪ್ರತಿದಿನ ಅಕ್ರಮ ಮದ್ಯ ಮಾರಟ ಮಾಡುವವರ ಮೇಲೆ ದಾಳಿ ಮಾಡುವ ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಮುಗಿದ ಮೇಲೆ ಒಂದು ಸ್ಥಳದಲ್ಲೂ ದಾಳಿ ಮಾಡಿದ ಉದಾಹರಣೆ ಸಿಗುವುದಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
– ಕೆ.ಎಸ್.ಮಂಜುನಾಥ್ ಕುದೂರು