Advertisement

ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟ: ಬಾಲಕ ಸಾವು

01:47 PM Mar 06, 2023 | Team Udayavani |

ಬೆಂಗಳೂರು: ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಬಾಲಕ ದುರ್ಮರಣ ಹೊಂದಿರುವ ಪ್ರಕರಣ ಹೆಬ್ಟಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ.

Advertisement

ಹೆಬ್ಟಾಳದ ಗುಡ್ಡದಹಳ್ಳಿಯ ನಿವಾಸಿ ಮಹೇಶ್‌ (13) ಮೃತಪಟ್ಟಿದ್ದಾನೆ.

ದೇವರಾಜ್‌ ಅವರಿಗೆ ಸೇರಿದ ಸಿಲಿಂಡರ್‌ ಅಂಗಡಿಯೊಂದರಲ್ಲಿ ರಿಯಾಕತ್‌ ಅಕ್ರಮವಾಗಿ ಸಿಲಿಂಡರ್‌ ರಿಫಿಲ್ಲಿಂಗ್‌ ಮಾಡುವಾಗ ಉಂಟಾದ ಅನಿಲ ಸೋರಿಕೆಯಿಂದ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ಗ್ಯಾಸ್‌ ರೀಫಿಲ್ಲಿಂಗ್‌ ಅಡ್ಡೆ ಬಳಿ ಆಟವಾಡುತ್ತಿದ್ದ ಮಹೇಶ್‌ ದೇಹ ಛಿದ್ರಗೊಂಡಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ.

ಆರೋಪಿ ರಿಯಾಕತ್‌ ಪರಾರಿಯಾಗಿದ್ದು, ಹೆಬ್ಟಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯಾದಗಿರಿಯ ರಾಮಸಮುದ್ರ ಮೂಲದ ಮಲ್ಲಪ್ಪ, ಸರಸ್ಪತಿ ದಂಪತಿ ಎರಡನೇ ಮಗ ಮಹೇಶ್‌, ಚೋಳನಾಯ ನಕಹಳ್ಳಿಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೃತನ ಪಾಲಕರು ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next