Advertisement

ಉಪ್ಪಿನಂಗಡಿ: ಅಕ್ರಮ ಪ್ರವೇಶ, ಜೀವಬೆದರಿಕೆ; ದೂರು

05:16 PM Sep 29, 2022 | Team Udayavani |

ಉಪ್ಪಿನಂಗಡಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದಲ್ಲಿನ ಬೆಥನಿ ಕಾನ್ವೆಂಟ್‌ ನೆಲ್ಯಾಡಿ ಎನ್ನುವ ಸಂಸ್ಥೆಗೆ ಯುವಕರಿಬ್ಬರು ಅಕ್ರಮ ಪ್ರವೇಶಗೈದು ಆಕ್ರಮಣಕಾರಿಯಾಗಿ ವರ್ತಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಡಬ ತಾಲೂಕಿನ ಪೇರಡ್ಕ ನಿವಾಸಿ ಸದ್ದಾಂ (31) ಮತ್ತು ಇಸ್ಮಾಯಿಲ್‌ (24) ಮಂಗಳವಾರ ಸಂಜೆ ಅಕ್ರಮ ಪ್ರವೇಶ ಮಾಡಿದ್ದನ್ನು ಕಂಡ ಕಾನ್ವೆಂಟ್‌ನಲ್ಲಿದ್ದ ಸಿಸ್ಟರ್‌ ಪರಿಮಳ ಅವರು, ಯಾಕಾಗಿ ಕಾನ್ವೆಂಟ್‌ ಒಳಗೆ ಬಂದಿರುವಿರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಮ್ಮನ್ನು ಪ್ರಶ್ನಿಸಲು ನೀನು ಯಾರು? ನಾವು ಯಾವಾಗ ಬೇಕಾದರೂ ಬರುತ್ತೇವೆ ಎಂದು ಬೈದಿದ್ದಾರೆ. ವಿಷಯ ತಿಳಿದು ಚರ್ಚ್‌ನಿಂದ ಸ್ಥಳಕ್ಕೆ ಆಗಮಿಸಿದ ಸೋನು ಜಾರ್ಜ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅನಂತರ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಿಸ್ಟರ್‌ ಪರಿಮಳ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಮರಿ ಪುಡಾರಿಗಳು ತಮ್ಮದೇ ಆದ ಸಾಮ್ರಾಜ್ಯ ಸ್ಥಾಪಿಸಲು ಮುಂದಾಗುತ್ತಿದ್ದು, ಮನಸೋ ಇಚ್ಚೆ ವರ್ತನೆ ತೋರುತ್ತಿರುವ ದೂರುಗಳ ಮಧ್ಯೆ ಇದೀಗ ದ್ಯಾರ್ಥಿನಿಯರು ಇರುವ ಕಾನ್ವೆಂಟ್‌ ಗೆ ನುಗ್ಗಿ ದಾಂಧಲೆ ಮಾಡುವಷ್ಟು ಧೈರ್ಯ ತೋರಿದ್ದು ನಾಗರಿಕ ಸಮಾಜದಲ್ಲಿ ಕಳವಳವನ್ನು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next