Advertisement

ಅಕ್ರಮ ಪ್ರವೇಶ, ಬೆದರಿಕೆ: ತನಿಖೆಗೆ ಆದೇಶ

07:54 PM Mar 10, 2023 | Team Udayavani |

ಕುಂದಾಪುರ: ಸ್ಥಿರಾಸ್ತಿಗೆ ಅಕ್ರಮವಾಗಿ ಪ್ರವೇಶಿಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರದ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ.
ಕೆದೂರು ಗ್ರಾಮದ ಪ್ರಕಾಶ್‌ ಅವರು ಖರೀದಿಸಿದ್ದ ಜಾಗಕ್ಕೆ ಭಾಸ್ಕರ ಶೆಟ್ಟಿ ಹಾಗೂ ಪುತ್ರಿ ಅಕ್ರಮವಾಗಿ ಪ್ರವೇಶಿಸಿ, ಬೆದರಿಕೆ ಹಾಕಿರುವುದಾಗಿ ಕೋಟ ಠಾಣೆಗೆ ಲಿಖೀತ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆ ನಡೆಸಿರಲಿಲ್ಲ. ಎಸ್ಪಿಗೂ ಈ ಬಗ್ಗೆ ದೂರು ನೀಡಲಾಗಿತ್ತು.
ಈ ಬಗ್ಗೆ ಕುಂದಾಪುರ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ತನಿಖೆ ನಡೆಸುವಂತೆ ಕೋಟ ಪೊಲೀಸರಿಗೆ ಆದೇಶಿಸಿದೆ.
ದೂರುದಾರರ ಪರ ಕುಂದಾಪುರ ನ್ಯಾಯವಾದಿ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next