Advertisement

ಹಾವೇರಿಯಿಂದ ಮಂಗಳೂರಿಗೆ ಹಿಂಸಾತ್ಮಕ ರೀತಿಯಲ್ಲಿ ಕಂಟೈನರ್ ನಲ್ಲಿ ಜಾನಾವಾರು ಸಾಗಾಟ

02:46 PM Jul 25, 2020 | keerthan |

ಸಿದ್ದಾಪುರ: ಕಂಟೈನರ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಒಟ್ಟು 17 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಜಾಲವೊಂದು ಹೊಸಗಂಡಿ ಚೆಕ್ ಪೋಸ್ಟ್ ಬಳಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Advertisement

ಘಟನೆಯಲ್ಲಿ ದಾವಣಗೆರೆ ಜಿಲ್ಲೆಯ ಮೆಹಬೂಬ್, ಹಾನಗಲ್ ನ ಅಲ್ಲಾ ಭಕ್ಷಿ, ಮಂಗಳೂರಿನ ಹನೀಫ್ ಮತ್ತು ಜಾಫರ್ ಸಾಧಿಕ್ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಮೂರು ಕೋಣಗಳು , 13 ಎಮ್ಮೆಗಳು, ಮತ್ತು ಒಂದು ಹೋರಿ ಒಟ್ಟು  17  ಜಾನುವಾರುಗಳನ್ನು ಹಾವೇರಿಯಿಂದ ಮಂಗಳೂರಿಗೆ ಯಾವುದೇ ಪರವಾನಗಿ ಇಲ್ಲದೆ, ಹಿಂಸಾತ್ಮಕ ರೂಪದಲ್ಲಿ ಕಂಟೈನರ್ ನಲ್ಲಿ ತುಂಬಿಸಿ ಸಾಗಿಸುತ್ತಿದ್ದರು. ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಮಾಸೆಬೈಲು ಪೊಲೀಸರು ಆರೋಪಿಗಳನ್ನು, ಜಾನುವಾರುಗಳನ್ನು ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next