Advertisement

ನೆಲ್ಯಾಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಓರ್ವನ ಬಂಧನ

10:17 AM Oct 20, 2019 | Sriram |

ನೆಲ್ಯಾಡಿ: ಹಾಸನ ಕಡೆಯಿಂದ ಮಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದುದನ್ನು ಅ.19ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಪತ್ತೆ ಹಚ್ಚಿದ ಪೊಲೀಸರು ಓರ್ವನನ್ನು ಬಂಧಿಸಿ, ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ್ದ ಈಚರ್‌ ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಮಂಗಳೂರು ತಾಲೂಕು ಶಾಂತಿಗುಡ್ಡೆ ನಿವಾಸಿ ಮೊಯಯಿದ್ದಿ ಎಂಬವರ ಮಗ, ಈಚರ್‌ ಚಾಲಕ ನವಾಜ್‌ (32)ಬಂಧಿತ. ಲಾರಿಯಲ್ಲಿದ್ದ ಹಸೈನಾರ್‌, ನಿಝಾರ್‌ ಜೋಕಟ್ಟೆ, ಹನೀಫ್ ಜೋಕಟ್ಟೆ, ಮುಸ್ತಾಕ್‌ ಅಡ್ಯಾರ್‌ ಕಣ್ಣೂರು ಎಂಬವರು ಪರಾರಿಯಾಗಿದ್ದಾರೆ.

ವಾಹನದಲ್ಲಿದ್ದ 17 ದನ, 3 ಗಂಡು ಕರು ಹಾಗೂ 2 ಎಮ್ಮೆ ಸೇರಿ ಒಟ್ಟು 22 ಜಾನುವಾರುಗಳನ್ನು ನೆಲ್ಯಾಡಿ ಹೊರ ಠಾಣಾ ಪೊಲೀಸರು ರಕ್ಷಿಸಿದ್ದಾರೆ. ಜಾನುವಾರುಗಳನ್ನು ಅಮಾನುಷವಾಗಿ ತುಂಬಿಸಲಾಗಿದ್ದು, ಪರಿಣಾಮ 1 ಜಾನುವಾರು ಉಸಿರುಗಟ್ಟಿ ಮೃತಪಟ್ಟಿದೆ.

ಘಟನೆ ವಿವರ:
ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಈ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮಂಗಳೂರು ಕಡೆಗೆ ವೇಗವಾಗಿ ಸಾಗಿದೆ. ಅನುಮಾನಗೊಂಡ ಚೆಕ್‌ಪೋಸ್ಟ್‌ ಸಿಬಂದಿ ನೆಲ್ಯಾಡಿ ಹೊರಠಾಣೆಯ ಎಸ್‌ಐ ಸೀತಾರಾಮ ಗೌಡರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಪ್ರತಾಪ್‌ ಅವರು ಈಚರ್‌ ಲಾರಿಯನ್ನು ನೆಲ್ಯಾಡಿಯಲ್ಲಿ ತಡೆಯಲು ಮುಂದಾದರು. ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾದ ವಾಹನವನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ತಡೆಯುವಲ್ಲಿ ಸಫ‌ಲರಾದರು.

ಜಾನುವಾರುಗಳನ್ನು ನೆಲ್ಯಾಡಿ ಹೊರಠಾಣೆಗೆ ತಂದು ಆರೈಕೆ ಮಾಡಲಾಗುತ್ತಿದೆ.ಎರಡು ವಾರದ ಹಿಂದೆಯೂ ನೆಲ್ಯಾಡಿ ಹೊರಠಾಣೆ ಪೊಲೀಸರು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಮೀಪದ ಈಚರ್‌ ಲಾರಿಯೊಂದನ್ನು ತಡೆದು 20ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದರು.

Advertisement

ನಿರಂತರ ನಡೆಯುತ್ತಿದೆ ಅಕ್ರಮ ದನಸಾಗಾಟ:
ಒಂದೆಡೆ ಪೊಲೀಸರ ಕಾರ್ಯಾಚರಣೆುಂದ ಅಕ್ರಮ ಸಾಗಾಟಗಳನ್ನು ಪತ್ತೆಹಚ್ಚುವ ಘಟನೆ ನಡೆಯುತ್ತಿದ್ದ ಹಾಗೆಯೇ ಅಕ್ರಮ ಸಾಗಾಟಗಾರರು ಐಶಾರಾಮಿ ವಾಹನಗಳಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಹೋಗುವ ಘಟನೆಗಳು ನಡೆಯುತ್ತಿದ್ದು ಇದನ್ನು ಪತ್ತೆ ಮಾಡುವುದೂ ಕೂಡಾ ಸವಾಲಿನ ಕಾರ್ಯವೇ ಆಗಿದೆ. ವಶಪಡಿಸಿಕೊಂಡ ವಾಹನಗಳು ಹಾಗೂ ಆರೋಪಿಗಳು ತಕ್ಷಣ ಜಾಮೀನಿನ ಮೇಲೆ ಹೊರಬರುತ್ತಿದ್ದು ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದಾರೆ ಎಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಕ್ರಮವಾಗಿ ಸಾಗಾಟಕ್ಕೆ ಬಳಸಲಾಗುವ ವಾಹನಗಳ ದಾಖಲೆ ಪತ್ರಗಳನ್ನು ಬೇರೊಂದು ವ್ಯಕ್ತಿಗೆ ಜಿಪಿಎ ಮಾಡಿಕೊಳ್ಳುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಕ್ಷಣ ವಾಹನಗಳನ್ನು ಬಿಡುಗಡೆಗೊಳಿಸಿ ಮತ್ತದೇ ದಂಧೆಗೆ ಬಳಸಲಾಗುತ್ತಿದೆ ಅನ್ನು ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಕ್ರಮ ಸಾಗಾಟ ನಡೆದಾಗ ಆರೋಪಿಗಳ ಹಾಗೂ ವಾಹನದ ಮೇಲೆ ಕಠಿಣ ಸೆಕ್ಷನ್‌ ಹಾಕಿ ವಾಹನ ಬಿಡುಗಡೆಯಾಗದಂತೆ ಕ್ರಮ ತೆಗೆದುಕೊಂಡಲ್ಲಿ ಮಾತ್ರ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಬರಬಹುದಷ್ಟೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next