Advertisement

ಸುಪ್ರೀಂಕೋರ್ಟ್‌ನಲ್ಲೂ ವಿಶ್ವಾಸ ಉಳಿದಿಲ್ಲ: ಕಪಿಲ್‌ ಸಿಬಲ್‌ 

09:12 PM Aug 08, 2022 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಕೂಡ ಈಗ ವಿಶ್ವಾಸ ಉಳಿದಿಲ್ಲ ಮತ್ತು ಕೆಲವೊಂದು ಸೂಕ್ಷ್ಮ ಪ್ರಕರಣಗಳನ್ನು ನಿಗದಿತ ನ್ಯಾಯಮೂರ್ತಿಗಳು ಇರುವ ನ್ಯಾಯಪೀಠಕ್ಕೆ ವಿಚಾರಣೆಗೆ ನೀಡಲಾಗುತ್ತದೆ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಹೇಳಿದ್ದಾರೆ.

Advertisement

ಶನಿವಾರ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದ ಅಂಶ ಈಗ ವಿವಾದಕ್ಕೆ ಕಾರಣವಾಗಿದೆ. “ಪ್ರಸಕ್ತ ಸನ್ನಿವೇಶನದಲ್ಲಿ ಸುಪ್ರೀಂ ಕೋರ್ಟ್‌ ಮೇಲೆ ವಿಶ್ವಾಸ ಹೊರಟುಹೋಗಿದೆ. ಕೆಲವು ಪ್ರಕರಣಗಳನ್ನು ನಿಗದಿತ ನ್ಯಾಯಮೂರ್ತಿಗಳಿರುವ ಪೀಠಗಳಿಗೆ ಮಾತ್ರ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ನ್ಯಾಯ ವಿಲೇವಾರಿ ವಿಚಾರದಲ್ಲಿ ಹೇಳುವುದಾರೆ, ಆಂತರಿಕ ಚಿತ್ರಣ ಬೇರೆಯದ್ದೇ ಆಗಿದೆ’ ಎಂದು ಹೇಳಿದ್ದರು.

ಆಕ್ಷೇಪ:
ಇದೊಂದು ನ್ಯಾಯಾಂಗ ನಿಂದನೆಯ ಪ್ರಕರಣ ಎಂದು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಹೇಳಿದ್ದರೆ, ಆಲ್‌ ಇಂಡಿಯಾ ಬಾರ್‌ ಅಸೋಸಿಯೇಷನ್‌ ಸುಪ್ರೀಂಕೋರ್ಟ್‌ನಲ್ಲಿ ಕಾನೂನಾತ್ಮಕ ಅಂಶಗಳ ಆಧರಿಸಿಯೇ ನ್ಯಾಯ ನಿರ್ಣಯ ಪ್ರಕ್ರಿಯೆ ನಡೆಯುತ್ತದೆ. ಇದೊಂದು ಆಕ್ಷೇಪಾರ್ಹ ಹೇಳಿಕೆ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next