Advertisement

ಸರ್ಕಾರಿ ಅಧಿಕಾರಿಗೆ ನೋಟ್‌ ಬರೆದಿಟ್ಟ ಕಳ್ಳ!

07:12 PM Oct 11, 2021 | Team Udayavani |

ಸರ್ಕಾರಿ ಅಧಿಕಾರಿಗೆ ನೋಟ್‌ ಬರೆದಿಟ್ಟ ಕಳ್ಳ!

Advertisement

ಮಧ್ಯ ಪ್ರದೇಶ: ಸರ್ಕಾರಿ ಅಧಿಕಾರಿಯೊಬ್ಬರ ಮನೆಗೆ ಕಳ್ಳತನ ಮಾಡಲು ಬಂದ ಕಳ್ಳನಿಗೆ ಹೆಚ್ಚಿನ ಹಣ ಸಿಗದ ಕಾರಣ, ಅಧಿಕಾರಿಗೆ ಆತ ಸಂದೇಶವೊಂದನ್ನು ಬರೆದಿಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯಲ್ಲಿ ನಡೆದಿದೆ.

ಖಾತೆಗಾಂವ್‌ ನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಆಗಿರುವ ತ್ರಿಲೋಚನ್‌ ಸಿಂಗ್‌ ಗೌರ್‌ ಅವರ ಮನೆಗೆ ಇತ್ತೀಚೆಗೆ ಕಳ್ಳ ನುಗ್ಗಿದ್ದಾನೆ. ಮನೆಯಲ್ಲಿ 30 ಸಾವಿರ ರೂ. ಮತ್ತು ಅಲ್ಪಸ್ವಲ್ಪ ಚಿನ್ನಾಭರಣ ಬಿಟ್ಟರೆ ಆತನಿಗೆ ಬೇರೇನೂ ಸಿಕ್ಕಿಲ್ಲ.

ಬೇಸರಗೊಂಡ ಕಳ್ಳ, “ದುಡ್ಡಿಲ್ಲ ಎಂದಾಗ ಲಾಕ್‌ ಮಾಡಬಾರದು, ಕಲೆಕ್ಟರ್‌’ ಎಂದು ಸಂದೇಶವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಈ ಸಂದೇಶದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೊಲೀಸರು ಕಳ್ಳನಿಗಾಗಿ ಹುಡುಕಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next