Advertisement

ನಾಲಿಗೆ ಬಿಗಿ ಹಿಡಿಯದಿದ್ದರೆ ಬಿಎಸ್‌ವೈ ಮಾನ ಕಳಿತೇನೆ

03:45 AM Jul 02, 2017 | Team Udayavani |

ವಿಜಯಪುರ: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಯಸ್ಸಿನಲ್ಲಿ ಹಿರಿಯರು. ಆದರೆ, ಗೌರವ ಪಡೆಯುವಂತಹ ಚಾರಿತ್ರ್ಯ, ಹಿನ್ನೆಲೆ ಹಾಗೂ ಸಂಸ್ಕಾರ ಇಲ್ಲದ ನಾಯಕ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ, ತಮ್ಮ ನಾಲಿಗೆಯ ಭಾಷೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳದಿದ್ದರೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಅವರ ಮಾನ ಹರಾಜು ಹಾಕುತ್ತೇನೆ’ ಎಂದು ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. “ಈ ಹಿಂದೆ ಹಾವೇರಿಯಲ್ಲಿ ನನ್ನ ಬಗ್ಗೆ ಅತ್ಯಂತ ಲಘು ಪದ ಬಳಸಿದರೂ ಸಹಿಸಿಕೊಂಡಿದ್ದೆ. ಈಗ ನನ್ನ ಕ್ಷೇತ್ರದಲ್ಲಿ ತಮ್ಮ ಪಕ್ಷದ ಸಮಾವೇಶದಲ್ಲಿ ನನ್ನ ಬಗ್ಗೆ ಹಗುರ ಪದ ಬಳಸಿ ಟೀಕಿಸಿದ್ದು, ನನ್ನ ತಾಳ್ಮೆ ಮೀರುತ್ತಿದೆ. ಅವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ನನ್ನ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ಯಡಿಯೂರಪ್ಪ ಅವರು ಇನ್ನಾದರೂ ಯಾರೋ ಬರೆದುಕೊಟ್ಟ ಚೀಟಿ ಓದುವುದು ಬಿಡಲಿ’ ಎಂದು ತಿರುಗೇಟು ನೀಡಿದರು.

ತನಿಖೆ ಮಾಡಿಸಲಿ:
“ನಾನು ಪ್ರತಿನಿ ಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಡಿಯೂರಪ್ಪ ಆಧಾರ ರಹಿತವಾಗಿ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರ ಬಳಿ ನನ್ನ ವಿರುದ್ಧ ಭ್ರಷ್ಟಾಚಾರದ ದಾಖಲೆಗಳಿದ್ದರೆ, ಅವರಿಗೆ ಧೈರ್ಯವಿದ್ದರೆ ಲೋಕಾಯುಕ್ತ ಸೇರಿ ಸರ್ಕಾರದ ಯಾವುದೇ ತನಿಖಾ ಸಂಸ್ಥೆಗೆ ನೀಡಲಿ. ಇಲ್ಲವೇ, ಮಾಧ್ಯಮಗಳಿಗಾದರೂ ಬಿಡುಗಡೆ ಮಾಡಲಿ’ ಎಂದು ಸವಾಲು ಎಸೆದರು.
 

Advertisement

Udayavani is now on Telegram. Click here to join our channel and stay updated with the latest news.

Next