Advertisement

Hubli; ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಬಿದ್ದರೆ ನಮ್ಮ ಹೈಕಮಾಂಡ್..: ಮಹೇಶ ಟೆಂಗಿನಕಾಯಿ

04:28 PM Jul 01, 2024 | Team Udayavani |

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ಅನುದಾನ ದೊರೆಯುತ್ತಿಲ್ಲವೆಂಬ ಆಕ್ರೋಶ ಕಾಂಗ್ರೆಸ್ ಶಾಸಕರಲ್ಲಿ ಭುಗಿಲೇಳುತ್ತಿದೆ. ಮತ್ತೊಂದು ಕಡೆ ಸಿಎಂ- ಡಿಸಿಎಂ ನಡುವಿನ ಜಗಳ ತಾರಕ್ಕೇರುತ್ತಿದ್ದು, ಆಂತರಿಕ ಕಚ್ಚಾಟದಿಂದ ಸರ್ಕಾರ ಕುಸಿದು ಬಿದ್ದರೆ, ಮುಂದಿನ ಕ್ರಮ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂಗಳ ಸೃಷ್ಟಿ ಸಿಎಂ ಬಣದ ಒತ್ತಾಯವಾದರೆ, ಡಿ.ಕೆ.ಶಿವಕುಮಾರ ಅವರನ್ನು ಸಿಎಂ ಮಾಡಬೇಕೆಂಬುದು ಡಿಸಿಎಂ ಬಣದ ಯತ್ನವಾಗಿದೆ. ಕಾಂಗ್ರೆಸ್ ನ ಆತಂರಿಕ ಗೊಂದಲ ಆಡಳಿತ-ಅಭಿವೃದ್ದಿ ಮೇಲೆ ಪರಿಣಾಮ ಬೀರುತ್ತಿದೆ. ಸಿಎಂ-ಡಿಸಿಎಂ ಸೇರಿದಂತೆ ರಾಜಕೀಯ ವಿಚಾರದಲ್ಲಿ ಮಠಾಧೀಶರನ್ನು ತರುವುದು ಸರಿಯಲ್ಲ ಎಂದರು.

ಅಂಜಲಿ ಹತ್ಯೆ ಪ್ರಕರಣದಲ್ಲಿ ಮತೃ ಕುಟುಂಬಕ್ಕೆ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ಗೃಹ ಸಚಿವರೇ ಅಂಜಲಿ‌ ನಿವಾಸಕ್ಕೆ ಭೇಟಿ ನೀಡಿ ಪರಿಹಾರದ ಬಗ್ಗೆ ತಿಳಿಸಿದ್ದರು.

ಅಂಜಲಿ ಕುಟುಂಬಕ್ಕೆ ಇಂದಿಗೂ ಪರಿಹಾರ ನೀಡದಿರುವುದು ನೋಡಿದರೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದೆನಿಸುತ್ತಿದೆ. ಅಂಜಲಿ ಕುಟುಂಬಕ್ಕೆ ಕನಿಷ್ಠ ಆಶ್ರಯ ಮನೆಯನ್ನು ನೀಡುವ ಕೆಲಸ ಮಾಡಿಲ್ಲ. ಅಂಜಲಿ ಸಹೋದರಿಗೆ ಸರ್ಕಾರಿ ಇಲ್ಲವೆ ಗುತ್ತಿಗೆಯಾಧಾರದ ಕೆಲಸ ನೀಡಲಿ ಎಂದರು‌.

Advertisement

Udayavani is now on Telegram. Click here to join our channel and stay updated with the latest news.

Next