Advertisement

ಪದಕ ಗೆದ್ದರೆ ರೈಲ್ವೇ ಕ್ರೀಡಾಳುಗಳಿಗೆ ಭಡ್ತಿ

10:59 AM Aug 03, 2018 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಪದಕ ಗೆಲ್ಲುವ ರೈಲ್ವೇ ಇಲಾಖೆಯ ಕ್ರೀಡಾಳುಗಳಿಗೆ ಅಧಿಕಾರಿ ಮಟ್ಟಕ್ಕೆ ಭಡ್ತಿ ನೀಡುವ ಹೊಸ ನಿಯಮಾವಳಿಗೆ ರೈಲ್ವೇ ಸಚಿವ ಪೀಯೂಷ್‌ ಗೋಯೆಲ್‌ ಅವರು ಗುರುವಾರ ಅಂಕಿತ ಹಾಕಿದ್ದಾರೆ.

Advertisement

ಇದರಿಂದಾಗಿ ಎರಡು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಯಾವುದೇ ಕ್ರೀಡಾಳುಗಳಿಗೆ, ಏಶ್ಯನ್‌ ಕ್ರೀಡಾಕೂಟ ಅಥವಾ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ಅಥವಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದವರಿಗೆ ಅಧಿಕಾರಿ ಶ್ರೇಯಾಂಕದ ಭಡ್ತಿ ನೀಡಲು ನಿರ್ಧರಿಸಲಾಗಿದೆ. 

ಪದ್ಮಶ್ರೀ ಪ್ರಶಸ್ತಿ ವಿಜೇತರು ಹಾಗೂ ಅರ್ಜುನ ಪ್ರಶಸ್ತಿ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಸೇರಿದಂತೆ ಯಾವುದೇ ರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರಶಸ್ತಿಗಳನ್ನು ಪಡೆದ ಕ್ರೀಡಾಳುಗಳಿಗೂ ಇದೇ ಮಾದರಿಯಲ್ಲಿ ಭಡ್ತಿ ನೀಡುವ ಅಂಶವನ್ನು ಹೊಸ ನಿಯಮಾವಳಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next