Advertisement

ಜಾತಿ ಹೆಸರೇಳಿ ವೋಟ್‌ ಕೇಳಿದ್ರೆ ಜನ ಒದಿತಾರೆ

11:16 PM Jun 16, 2019 | Lakshmi GovindaRaj |

ಕೊಪ್ಪಳ: ಚುನಾವಣೆಯಲ್ಲಿ ಜಾತಿಗೀತಿ ನಡೆಯಲ್ಲ. ಒಂದು ವೇಳೆ ಜಾತಿ ಹೆಸರೇಳಿ ವೋಟು ಕೇಳಿದ್ರೆ ಜನ ಒದಿತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು. ನಗರದಲ್ಲಿ ನಡೆದ ಸಂಸದ ಸಂಗಣ್ಣ ಕರಡಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್‌ ಸ್ವಾತಂತ್ರ್ಯ ಬಂದಾಗಿನಿಂದ ಜಾತಿ ಹೇಳೇ ಚುನಾವಣೆ ಮಾಡಿಕೊಂಡು ಬಂದಿದೆ.

Advertisement

ಅಭಿವೃದ್ಧಿ ಮಾಡಿಲ್ಲ. ಜಾತಿ ಹೆಸರು ಬಳಸಿ ಜನರಿಗೆ ದ್ರೋಹ ಮಾಡಿದ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಜನ ನಮಗೆ ಜಾತಿ ನೋಡದೇ ಮತ ನೀಡಿದ್ದು, ಇದನ್ನು ಕಾಂಗ್ರೆಸ್‌ ಮರ್ಯಾದೆಯಿಂದ ಸೋಲೊಪ್ಪಿಕೊಳ್ಳಲಿ ಎಂದು ಹೇಳಿದರು.

ಬೇಕಿದ್ದರೆ ಡಿಕೆಶಿ ಕನಕಪುರ ಆಸ್ತಿ ಮಾರಲಿ: ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, 3 ಸಾವಿರ ಕೋಟಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರ ಜಿಂದಾಲ್‌ಗೆ ಕೊಡಲು ಮುಂದಾಗಿದೆ. ಇದಕ್ಕೆ ಅವರ ಪಕ್ಷದವರೇ ವಿರೋಧಿಸಿದ್ದಾರೆ.

ಆದರೆ ಡಿಕೆಶಿ ಜಿಂದಾಲ್‌ ಪರ ವಕಾಲತು ಮಾಡಿದ್ದಾರೆ. ಸರ್ಕಾರದ ಆಸ್ತಿ ಮಾರುವ ಹಕ್ಕು ಇವರಿಗೆ ಕೊಟ್ಟೋರ್ಯಾರು? ಬೇಕಿದ್ದರೆ ಅವರು ತಮ್ಮ ಕನಕಪುರದ ಸ್ವಂತ ಆಸ್ತಿ ಮಾರಾಟ ಮಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next