Advertisement

ನೆಲ-ಜಲ ಕಾನೂನು ಬದ್ಧವಾಗಿದ್ದರೆ, ಬೇರೆ ರಾಜ್ಯಕ್ಕೆ ಒಂದಿಂಚೂ ಜಾಗ ಬಿಟ್ಟುಕೊಡಲ್ಲ: ಈಶ್ವರಪ್ಪ

09:49 AM Jan 03, 2020 | Mithun PG |

ಶಿವಮೊಗ್ಗ: ಸಂಕ್ರಾತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಅಗಬಹುದು ಅಥವಾ ಪುನರ್ ರಚನೆ ಆಗಬಹುದು. ಸಚಿವ ಸಂಪುಟದ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತವರಿಗೆ ಮತ್ತು ಆರ್. ಶಂಕರ್  ಕುರಿತು ಪಕ್ಷದ ವರಿಷ್ಠರು ತಿರ್ಮಾನ ತಗೆದುಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಆರ್.ಶಂಕರ್ ಗೆ 6 ತಿಂಗಳಲ್ಲಿ  ಚುನಾವಣೆಯಲ್ಲಿ ಗೆದ್ದು ಅಥವಾ ಎಂಎಲ್ ಸಿ ಯಾಗಿ ಗೆದ್ದರೆ  ಸಚಿವ ಸ್ಥಾನ ನೀಡಲಾಗುವುದು ಎಂದರು.

ರಾಜ್ಯದಲ್ಲಿ  ಡಿಸಿಎಂ ಹುದ್ದೆಯ ಕುರಿತು ರೇಣುಕಾಚಾರ್ಯ ಸಹಿ ಸಂಗ್ರಹಿಸಿಲ್ಲ. ಪಕ್ಷದ  ವರಿಷ್ಠರು ಡಿಸಿಎಂ ಹುದ್ದೆಯ ವಿವಾದಕ್ಕೆ ತೆರೆಯೆಳೆಯಲಿದ್ದಾರೆ. ಡಿಸಿಎಂ ಕುರಿತು ವೈಯಕ್ತಿಕ  ಯಾವುದೇ ಅಭಿಪ್ರಾಯವಿಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ  ಬದ್ಧ ಎಂದರು.

ಗಡಿ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಕೆಲ ಸಚಿವರು ದೊಡ್ಡವರಾಗುವ ಭ್ರಮೆಯಲ್ಲಿದ್ದಾರೆ. ನಾವು ನೆಲ ಜಲ ವಿಚಾರದಲ್ಲಿ ಯಾವ ರಾಜ್ಯದ ತಂಟೆಗೆ ಹೋಗಿಲ್ಲ. ವಿವಾದವನ್ನು ಹುಟ್ಟುಹಾಕಿಲ್ಲ. ಕಾನೂನು ಬದ್ದವಾಗಿದ್ದರೆ ನೆಲ- ಜಲವನ್ನ ಬೇರೆ ರಾಜ್ಯಗಳಿಗೆ ಬಿಡಲಾಗುತ್ತೆ. ಇಲ್ಲವಾದ್ರೆ ಒಂದು ಇಂಚು ಕೂಡ  ಜಾಗವನ್ನ ಬಿಟ್ಟು ಕೊಡುವುದಿಲ್ಲ  ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next