Advertisement

ಯಾರ ಕೈಯಲ್ಲಿ ರಕ್ತದ ಕಲೆಗಳಿವೆ ಎಂಬುದು ನಿಮಗೆ ತಿಳಿಯಲಿದೆ

11:30 PM Dec 05, 2022 | Team Udayavani |

ಕಾಶ್ಮೀರ: “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆಮಾ ಬಗ್ಗೆ ಇಸ್ರೇಲ್‌ ನಿರ್ದೇಶಕ ನದಾವ್‌ ಲ್ಯಾಪಿಡ್‌ ಅವರ ಹೇಳಿಕೆ ಹಾಗೂ ಕಾಶ್ಮೀರಿ ಹಿಂದೂಗಳಿಗೆ ಉಗ್ರ ಸಂಘಟನೆ ದಿ ರೆಸಿಸ್ಟೆಂಟ್‌ ಫ್ರಂಟ್‌(ಟಿಆರ್‌ಎಫ್) ಹಾಕಿರುವ ಬೆದರಿಕೆ ಬಗ್ಗೆ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ.

Advertisement

“ಗೋವಾದಲ್ಲಿ ನಡೆದ 2022ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಸ್ಲಾಮಿಕ್‌ ಭಯೋತ್ಪಾದಕರಿಗೆ ಬಹಿರಂಗವಾಗಿ ಸೈದ್ಧಾಂತಿಕ ಬೆಂಬಲ ನೀಡಿದ ಒಂದು ವಾರದಲ್ಲೇ ಲಷ್ಕರ್‌-ಎ-ತಯ್ಯ ಬಾದ ಸಹ ಸಂಘಟನೆ ದಿ ರೆಸಿಸ್ಟೆಂಟ್‌ ಫ್ರಂಟ್‌, ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬೆದರಿಕೆ ಹಾಕಿದೆ,’ ಎಂದು ವಿವೇಕ್‌ ಅಗ್ನಿಹೋತ್ರಿ ಟ್ವೀಟ್‌ ಮಾಡಿದ್ದಾರೆ.

“ಇದಾದ ಅನಂತರ ಕಾಶ್ಮೀರದಲ್ಲಿ ಯಾವುದೇ ಹಿಂದೂವನ್ನು ಗುರಿಯಾಗಿಸಿ ದಾಳಿ ನಡೆದರೆ ಯಾರ ಕೈಯಲ್ಲಿ ರಕ್ತದ ಕಲೆಗಳಿವೆ ಎಂಬುದು ನಿಮಗೆ ತಿಳಿಯಲಿದೆ,’ ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ. ಇದರ ಜತೆಗೆ ಅವರು ನದಾವ್‌ ಲ್ಯಾಪಿಡ್‌, ಮೆಹಬೂಬಾ ಮುಫ್ತಿ ಮತ್ತು ಟಿಆರ್‌ಎಫ್ ಬಿಡುಗಡೆಗೊಳಿಸಿರುವ 58 ಕಾಶ್ಮೀರಿ ಪಂಡಿತ್‌ ಅಧಿಕಾರಿಗಳ ಪಟ್ಟಿಯ ಫೋಟೋ ಗಳನ್ನು ಟ್ವೀಟ್‌ನೊಂದಿಗೆ ಲಗತ್ತಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next