Advertisement

Ujjain: ಗಾಳಿಯ ಹೊಡೆತಕ್ಕೆ ಉರುಳಿದ ವಿಗ್ರಹಗಳು

10:54 PM May 29, 2023 | Team Udayavani |

ಉಜ್ಜೈನ್‌: ಉಜ್ಜೈನ್‌ಯ ಮಹಾಕಾಲೇಶ್ವರ ದೇಗುಲದಲ್ಲಿ ಭಾನುವಾರ ದುರಂತವೊಂದು ತಪ್ಪಿದೆ. ಕಳೆದ ವರ್ಷ ದೇಗುಲದ ಸುತ್ತ ಉದ್ಘಾಟನೆಯಾದ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲ್ಪಟ್ಟಿದ್ದ ಸಪ್ತರ್ಷಿಗಳ ಪೈಕಿ ಆರು ವಿಗ್ರಹಗಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ನೆಲಕ್ಕುರುಳಿವೆ. ಈ ಸಂದರ್ಭದಲ್ಲಿ ಶ್ರೀಕ್ಷೇತ್ರದಲ್ಲಿ ಜನರು ಇದ್ದರೂ ಹಾನಿ ಉಂಟಾಗಿಲ್ಲ. ಕೆಲ ಹೊತ್ತಿನ ವರೆಗೆ ಅಲ್ಲಿ ಜನರ ಪ್ರವೇಶ ನಿರ್ಬಂಧಿಸಿ, ನಂತರ ಅದನ್ನು ತೆರೆಯಲಾಗಿತ್ತು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಮಹಾಕಾಲ ಲೋಕ ಕಾರಿಡಾರ್‌ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಅಲ್ಲಿ ಒಟ್ಟು 160 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಉರುಳಿದ ವಿಗ್ರಹಗಳು 10 ಅಡಿ ಎತ್ತರದವು. ಭಾನುವಾರದ ಭೀಕರ ಗಾಳಿಯಿಂದ ಉಜ್ಜೆ„ನಿಯ ಇತರೆ ಭಾಗಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮಹಾಕಾಲ ದೇಗುಲದಲ್ಲಿ ಸಂಭವಿಸಿದ ಘಟನೆಯಿಂದ ಕಾಂಗ್ರೆಸ್‌-ಬಿಜೆಪಿ ನಡುವೆ ವಾಗ್ವಾದ ಶುರುವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next